Posts

Showing posts from February, 2023

Mamsada Pindavu

ಮಾಂಸದ ಪಿಂಡವು ಮಲಮೂತ್ರ ಗುಂಡಿಯು ತೃಣ ಮುಚ್ಚಿದ ಕೂಪವು ಎಂಬುದ ಮರೆತು ಕಮಲನೇತ್ರಳೆ ಪಿಕಕಂಠೆ ಸುಮನೋಹರೆ ನೀನಿರೆ ರಾಜ್ಯ ಧನ ಕನಕ ಪೂರ್ಣನು ಎನ್ನುತ ಹರಿಯ ಮರೆತು ಮೆರೆಯುವರು ಮಧುರ ವಚನವು ಹೃದಯ ತೀಕ್ಷ್ಣ ವು ಕಾರ್ಯ ಸಾಧಿಸಲು ಭರ್ತೃ ಭ್ರಾತೃ ಎಣಿಸರು ಶಿಲೆ ಹೆಣ್ಣಾಗಿಸಿದ ರಾಘವ ವಿಠಲನ ಕರ್ದಮವರದನ ಬೇಡಲು ಒಲಿದರೆ ಸಾಧನಕನುಕೂಲ ಸತಿಯನೀವ.

Hiriya Daivavu Jagadi

ಹಿರಿದು ದೈವವು ಜಗದಿ ಸಿರಿನಿಲಯನಿರುವಾಗ ಬರಿದು ದೈವಗಳ ಬೆನ್ಹತ್ತುವುದು ಸರಿಯೇ ದುರಿತಕಾನನಕನಲ ಗುರುಜಾತವಿರುವಾಗ ಹರಿಯ ಅರಿಯದ ಭೈರವಿಗಳು ಸರಿಯೇ ಹರನ ವೃಕನಿಂದ ಸಲುಹಿದ ಹೆದ್ದೈವ ಸಿರಿ ರಾಘವ ವಿಠಲನ ಚರಣ ದ್ವಂದ್ವಗಳ ಅರಿತು ಭಜಿಸೆಲೋ ಕಷ್ಟಗಳ ಕಳೆವ. 

Taanu Bhramisalu Jagave

ತಾನು ಭ್ರಮಿಸಲು ಜಗವೆ ಭ್ರಮಿಸುವುದೆಂದ ಮೇಘವು ಚಲಿಸಲು ಗಗನ ಚಲಿಸುವುದೆಂದ ತಾನು ಚರಿಸಲು ಅಚರ ಚರಿಸುವುದೆಂದ ಗುಣಪೂರ್ಣ ಚೆಲ್ವ ರಾಘವ ವಿಠಲನೊಳು ತನ್ನ ದೋಷಗಳ ಕಾಂಬ ದೋಷಲೇಶವಿದೂರನೆಂದು ತಿಳಿದು ಶೇಷಶಯನನ ಭಜಿಸಲು ಸದೃಶ ಗತಿಯನೀವ.

Jagava Srujipa Deva

ಜಗವ ಸೃಜಿಪ ದೇವ ಅವನ ಸೃಜಿಪರಿಲ್ಲ ಜಗದಾವಸ್ಥೆ ಕಾರಣ ಇವಗಾವಸ್ಥೆಗಳಿಲ್ಲ ಕರಣಮಾನಿಗಳು ವಶದಿ ಇವನಾರ ವಶಕ್ಕಿಲ್ಲ ಜಗದ ವ್ಯಾಪಾರವು‌ ರಾಘವ ವಿಠಲನಿಂದ ಎಂದೊಂದಿಷ್ಟು ಸ್ಮರಿಸಲು ಕರ್ಮ ಬಂಧನ ಕಳೆವ.

A Vastu E Vastu Nodi

 ಆ ವಸ್ತು ಈ ವಸ್ತು ನೋಡಿ ಎಂಜಲ ಸುರಿಸಿ ನನ್ನ ದು ಎಂಬೋ ದೃಢ ಭಾವವ ಧರಿಸಿ ವ್ಯತ್ಯಯವಾಗೆ ಕಳೆದುಪೋಗೆ ಬಹು ದುಃಖಿಸಿ ಶೋಕ ಪರಂಪರೆಯಲಿ ಚಿತ್ತವು ಭ್ರಮಿಸಿ ಮೂಢತನದಲಿ ಕಾರ್ಯಾಕಾರ್ಯ ತ್ಯಜಿಸಿ ಇಂತಿಪ್ಪ ಕ್ಷುಲ್ಲಕರ ನೋಡೆಲೋ ನೋಡೆಲೋ ನಿತ್ಯವಸ್ತು ನಮ್ಮ ರಾಘವವಿಠಲನಂಘ್ರಿಯೊಳು ಮನ ಮಗ್ನವಾಗಿಸು ನಿತ್ಯಾನಂದವನೀವ.

Haribhakti Haripreethi

ಹರಿಭಕ್ತಿ ಹರಿಯ ಪ್ರೀತಿ ಜ್ಞಾನಾನಂದ ಗುಣಗಳು  ಶ್ರೀ ಲಕುಮಿಯಲ್ಲಿ ಅಧಿಕ ಬ್ರಹ್ಮಾದಿಗಳ ನೋಡಲು ಪರಮ ಭಾಗವತೆಯೆಂದು ಹರಿಯು ಪರಮ  ಪ್ರೀತಿಯ ಮಾಡುವನು. ಸ್ತ್ರೈಣನಲ್ಲ ಏಣಾಕ್ಷಿಲೋಲ  ಶ್ರೀ ರಾಘವ ವಿಠಲನು ವ್ರಜಸ್ತ್ರೀರತ್ನಕೂಟಕೂಟಸ್ಥನೋ.

Maralu Maadikondeyalle Mayadeviye

ಮರುಳು ಮಾಡಿಕೊಂಡೆಯಲ್ಲೆ ಮಾಯಾ ದೇವಿಯೇ ಉರಗಶಯನ ಗೋವಿಂದ ನಿರುತ ನಿನ್ನ ಮರೆಯದಂತೆ ಪ್ರಲಯದಲ್ಲಿ ಸಕಲಜಗವು ನಿದ್ರಿಸಿರಲು ಜಾಣ್ಮೆಯಿಂದ ಚೆಲುವೆ ನೀನು ಶ್ರುತಿಗಳಿಂದ ಸ್ತುತಿಸಿ ಪತಿಯ ಎಬ್ಬಿಸುತಲಿ.  ೧ ಎಷ್ಟು ರೂಪ ಹರಿಯು ತಾಳ್ವ ಅಷ್ಟು ರೂಪದಿಂದ ಇರುತ ಇಷ್ಟ ಪತಿಯ ಸೇವೆಮಾಡಿ ಗರ್ಭದಿಂದ ಬಪ್ಪುವಂತೆ. ೨ ಹರಿಯ ಸದನದಲ್ಲಿ ಸಾಸಿರಾರು ಸಖಿಯರಿರಲು ತಾನೆ ಪರಮ ಸಂಭ್ರಮದಿ ಸಕಲ ಗೃಹದ ಕೃತ್ಯಗಳನು ಮಾಡಿ.  ೩ ಹರಿಯು ಧರೆಲಿ ಇರಲು ಆವ ಲೀಲೆಗಳನು ತಾನು ಮಾಳ್ಪ  ಅರಿತು ಮತಿಯ ಕುಶಲೆ ತಾನು ಅಂತು ಲೀಲೆಗಳನು ಮಾಡಿ.  ೪ ಕೃಷ್ಣ ತನ್ನ ಅಣ್ಣನನ್ನು ರೂಪಗೆಡಹಿ ಮಾನವಳಿಸೆ ಕಷ್ಟಮಾತು ನುಡಿಯೆ ಒಂದಿಷ್ಟು ಕಲಹವಾಗದಂತೆ.  ೫ ಅನ್ಯ ಸತಿಯ ಕರವ ಪಿಡಿವ ಕಾಲದಲ್ಲು ಸುರರು ಇರಲು ನಿನ್ನ ಕರೆಸಿ ಬಿಡದೆ ಹರಿಯು ಎದುರಿನಲ್ಲಿ ವರಿಸುವಂತೆ.   ೬ ಇನ್ನು ಬೇಡಿಕೊಂಬೆ ಸಿರಿಯೆ ಚೆನ್ನ ರಾಘವವಿಠಲಪಾದ ಎನ್ನ ಮನದಿ ನಲಿಯುವಂತೆ ಮುನ್ನ ಭಾಗ್ಯ ಕೊಟ್ಟು ಕಾಯೆ.   ೭

Karava Ettida Veera Hanumantha

 ಕರವ ಎತ್ತಿದ ವೀರ ಹನುಮಂತ ಕರವನೆತ್ತಿದ ನಿತ್ಯ ಶರಣರ ಭಯಮೂಲ ಪರಿಹರಿಸುತ ನಿತ್ಯ ಸುರತಿಯ ಕೊಡುವೆಯೆಂದು ಬಿಲ್ಲ ಪಿಡಿದು ರಾಮ ಅನುಜನೊಡನೆ ಬರಲು ಕೊಲ್ಲಲು ವಾಲಿಯು ಕಳುಹಿಸಿದವನೆನ್ನೆ ಕ್ಷುಲ್ಲಕ ಮತಿಯಲ್ಲಿ ಹೆದರಿ ಕಂಪಿಸುತಿರೆ ಬಲ್ಲಿದ ಹನುಮಂತ ರವಿಜನ ಸಲಹಲು.               ೧ ಉದಧಿ ದಾಟಲು ಎಮಗಶಕ್ಯವೆನ್ನುತ ದುಃಖ ಉದಧಿಲಿ ಕಪಿಸೈನ್ಯ ಬಿದ್ದು ಉಪವಾಸದಿರಲು ಬುಧರೋಳುತ್ತಮ ವೀರ ತಾನಿರೆ ಭಯವಿಲ್ಲ ಉದಧಿ ದಾಟುವೆ ರಾಮಕಾರ್ಯ ಸಾಧಿಸಲೆಂದು.  ೨ ಶಿವವರದಿಂದ ಅವಧ್ಯ ರಕ್ಕಸರ ನೋಡಿ ಜವನ ವಶಕ್ಕವರನಿಡುವ ಸಂಭ್ರಮದಿಂದ ಭವರೋಗಮೋಚಕ ರಾಮನ ನಿಜದಾಸ ಅವರ ಕರತಲದಿಂದ ಬಡಿಯಲೋಸುಗವೆಂದು.    ೩ ಸೀತೆಯ ವನದಲ್ಲಿ ಪೀಡಿಸಿ ಮೆರೆದಂಥ ದೈತ್ಯ ಪತಿ ಸಂಗರದಿ ಎದುರಾಗಿ ನಿಂತಿರಲು ವಾತಸುತ ನೋಡುತ ರೋಷತಾಮ್ರಾಕ್ಷದಿ ಭೀತಿವಿಧುರ ಅವನ ಎದೆಯ ಸೀಳಲು ತ್ವರಿತ.      ೪ ರಾಮನಾಮವ ಸತತ ಭಾವ ಭಕುತಿಯಿಂದ ನೇಮದಿ ಪಾಡುವ ಜನರ ಭಯಸ್ತೋಮವ ಈ ಮಹಿಯೊಳು ಇಲ್ಲದಂತೆ ಮಾಡುವೆನೆಂದು ಭೌಮ ರಾಘವ ವಿಠಲ ದಾಸ ಘೋಷಿಸಲೆಂದು.   ೫

Namo Namo Bhargava Rama

 ಝಂಪೆ ತಾಳ ನಮೋ ನಮೋ ಭಾರ್ಗವ ರಾಮ ನಮೋ ನಮೋ ನೀರದ ಶ್ಯಾಮ ನಮೋ ಕೋಡಂಡಪರಶು ಧರನೆ ನಮೋ ಜಮದಗ್ನಿ ಶಿರಸ್ಸಂಧಾತನೆ ನಮೋ ಪಿತೃ ವಾಕ್ಯ ಲಾಲಿಪನೆ ನಮೋ ಮಾತೃಭಯ ನಿವಾರಕನೆ.         ೧ ಕಾರ್ತವೀರ್ಯನು ಅಘವನೆಸಗಲು ಆರ್ತ ಜನನಿಯ ಸಂತೈಸುತಲಿ ಆತ್ತಚಾಪಪರಶು ಧಾವಿಸಿ ಬಂದೆಯೋ ಪೂರ್ತ ಸೈನ್ಯದ ಶಿರವ ಕೆಡುಹಿದೆ.          ೨ ಎನ್ನ ಕಾಮವೆ ತುರಗ ಮದವು ದ್ವಿರದವು ಎನ್ನ ಕ್ರೋಧವೆ ಭಟ ಲೋಭ ಮಹಾರಥ ಇನ್ನು ಮೀರಿದ ಸೈನ್ಯ ಕೆಡಹಲಾಯುಧವ ಚೆನ್ನ ರಾಘವ ವಿಠಲ ಮತ್ತೆ ಧರಿಸಿದೆಯೇನೋ.  ೩

Allane nammaneya daiva

ಅಲ್ಲನೇ ನಮ್ಮನೆಯ ದೈವ ಅಲ್ಲ ಇಲ್ಲದೆ ಬದುಕೇ ಇಲ್ಲ ಬಲ್ಲಿದ ಜನ ಕೇಳಿ ಸಿರಿಯ ನಲ್ಲನಲ್ಲದೆ ಪರದೈವವಿಲ್ಲ. ಪ್ರಕೃತಿಯು ತಾನಲ್ಲ ಮಹತ್ತು ತಾನಲ್ಲ  ವಿಕೃತಿಯು ತಾನಲ್ಲ ಭೌತಿಕ ತಾನಲ್ಲ ಪ್ರಾಕೃತ ತಾನಲ್ಲ ಪಾರ್ಥಿವ ತಾನಲ್ಲ ಸುಕೃತಿಗಳೊಡೆಯ ಏನಲ್ಲ ಶ್ರುತಿ ಬಲ್ಲ.          ೧ ದಾನವ ತಾನಲ್ಲ ರಕ್ಕಸ ತಾನಲ್ಲ ಮಾನವ ತಾನಲ್ಲ ದೇವತೆ ತಾನಲ್ಲ ಮೌನಿಯು ತಾನಲ್ಲ ರಾಜನು ತಾನಲ್ಲ ಜ್ಞಾನರೂಪನು ತಾನು ಏನಲ್ಲ ಏನಲ್ಲ.           ೨ ತಾನಲ್ಲ ಪುರುಷನು ತಾನಲ್ಲ ಮಹಿಳೆಯು  ತಾನಲ್ಲ ಷಂಡನು ತಾನಲ್ಲ ಜಂತುವು  ತಾನಲ್ಲ ನಿರ್ಗುಣ ತನಗಿಲ್ಲ ಗುಣಗಳು   ಏನಿಲ್ಲದಿರುವಾಗ್ಯು ಇಲ್ಲದೆ ಇರಲಿಲ್ಲ.            ೩ ತಾನಿರದ ಸ್ಥಳವಿಲ್ಲ ತನಗಿರದ ಪೆಸರಿಲ್ಲ ತಾನಿರದೆ ಯಾರಿಲ್ಲ ತನ್ನಿಂದ ಇಲ್ಲಿ ಎಲ್ಲ ತಾನಿರದೆ ಹುಟ್ಟಿಲ್ಲ ಸ್ಥಿತಿಲಯಮೊದಲಿಲ್ಲ ತಾನಿರದೆ ಆನಂದ ಶೋಕ ಯಾರಿಗುಯಿಲ್ಲ.  ೪ ಐದು ಬಾರಿ ದಿನದಿ ನೆನೆಯುವಂಥವನಲ್ಲ ಐದು ರೂಪಿ ಜಗದಿ ವ್ಯಾಪಿಸಿಯಿಹನಲ್ಲ ಐದುಮೊಗನ ತಾತ ರಾಘವವಿಠಲನಲ್ಲ ಐದಿಸುವ ಗತಿಯ ಬಿಡದಲೆ ಭಜಿಸಲು.        ೫

Ekadashi Mahime

ಹರಿದಿನಕೆ ಸಮವಾದ ದಿನವಿಲ್ಲ ಅರಿಷಡ್ವರ್ಗವ ತರಿದು ಬಿಸುಟುವ ದಶಮಿ ದಿನ ಬರಲು ವಿಷಯದಾಶೆಯ ತೊರೆದು ಕೇಶವ ಎನುತಲಿ ನಿಯಮಕೈಗೊಂಡು ಶೇಷಶಯನನೆ ತ್ರಿದಿನವ್ರತವನ್ನೆ ಆಶೆಯಿಂದಲಿ ಮಾಳ್ಪೆ ವಿಘ್ನವ ಕಳೆಯೆನ್ನಿ. ೧ ಏಕಾದಶಿಯಂದು ದಂತಶೋಧನೆ ಸಲ್ಲ ವಾಕು ವ್ಯರ್ಥ ತ್ಯಜಿಸಿ ಉಷ್ಣೋದಕವ ತೊರೆದು  ಕಾಕುಮತಿಯ ಬಿಟ್ಟು ತ್ವರಿತ ತನು ಶೋಧಿಸಿ ಹಕ್ಕಿವಾಹನ ಸಿರಿ ಲೋಲನ ಅರ್ಚಿಸಿ. ೨ ಹಗಲು ನಿದ್ದೆಯು ಮೈಥುನ ಭೋಜನ ಯೋಗ್ಯವಲ್ಲವು ತಾಂಬೂಲ ತೈಲವು ಪಾಲ್ಗಡಲಶಾಯಿಯ ಮೆಚ್ಚಿಸಿ ಪೂಜಿಸಿ ನೀಗಿಸಿ ಪಾಪವ ಹರಿಯ ಕರುಣೆಲಿ. ೩ ಭಾಗವತರ ಕೂಡಿ ನಲಿದು ಕುಣಿಯುತ ಜಾಗರ ಮಾಡುತ ತರತಮ ನೆನೆಯುತ ಯುಗಳ ರಹಿತನ ಸಾಸಿರನಾಮದಿ ಯೋಗದಿ ತುತಿಸಲು ಪಾಪಗಳಳಿವುವು. ೪ ಹಗಲು ಪೂಜಿಸಿ ಭುಂಜಿಸಿ ಕಾಲದಿ ಅಗಮ್ಯ ಮಹಿಮಗೆ ಪುಣ್ಯವನರ್ಪಿಸಿ ರಾಘವವಿಠಲನು ಜ್ಞಾನವ ಕೊಡುವನು ಹಿಗ್ಗುತ ಮುಕುತಿಲಿ ನಿರುತ ಒಲೈಸುವ. ೫

BALAKRISHNA MANEGE BANDA

ಬಾಲಕೃಷ್ಣ ಮನೆಗೆ ಬಂದ  ಬಾಗಿಲು ತೆರೆಯಿರೋ ಬಾಲಚಂದ್ರನಿಭನು  ಪೂರ್ಣ ಗುಣನು ಕರುಣೆಯಿಂದ ಬಂದ ಬೊಮ್ಮ ರುದ್ರ ವರ್ತಕನು ಕೇಶಿಮಾರ  ಶಸ್ತ ಕೇಶಿ  ಎಮ್ಮ ಪೊರೆಯಲೆಂದು ಕೇಶ ರೂಪಿ ಕೇಶವ ಬಂದನು. ೧ ಸರುವವ್ಯಾಪ್ತ ಪುರುಷರೂಪ ತ್ರಯನು ಲಕುಮಿ ಮುಕ್ತ ರಯನ ನರರ ಅಯನ ಸುಗುಣ ಸ್ವಚ್ಛ ಜ್ಞೇಯ ಗಮ್ಯ  ಒಡೆಯನೋ. ೨ ರಮೆಯ ಅರಸ ಸಕಲ ವೇದ ಶಾಸ್ತ್ರ ಪಾದ್ಯ ಒಡೆಯ ಹೀನ ಎಮಗೆ ಮುಕ್ತಿ ನೀಡಲೆಂದು ಗೋಪಿ ರಮಣ ಮಾಧವ ೩ ಗೋವ ಕಾಯ್ವ ಸಕಲವೇದ ರಕ್ಷೆ ಮಾಳ್ಪ ಸ್ವರ್ಗದೊಡೆಯ ಮಾವನನ್ನು ಕೊಂದ ಗೋವಿಂದ ನಲಿಯ  ಬಂದನು  ೪ ವಿಶ್ವ ವ್ಯಾಪ್ತ ವಿಶ್ವರೂಪ ಚಿತ್ರ ಪ್ರಾಣ ಮೋದ ಶೀಲ ವಿಶ್ವ ದುರಿತ ಕಳೆಯಲೆಂದು ವಿಷ್ಣು ರೂಪಿ ಬಂದನು.  ೫ ಚೆಂದ ಪಾಕ ಮಾಳ್ಪ ಭೀಮ ನೇತೃ ದುಷ್ಟ ಸುಖವ ಕಳೆವ ಬಂದ ಮಧುಕೈಟಭಾರಿ ಮಧುಸೂದನಾಹ್ವನು.   ೬ ತ್ರಿಗುಣ ವೇದಗಳನು ಆಳ್ವ ಮೂರು ಹೆಜ್ಜೆ ಭುವಿಯಲ್ಲಿಟ್ಟ ತ್ರಿಗುಣ ಹೀನ ತ್ರಿವಿಕ್ರಮಾರ್ಯ ಹೆಜ್ಜೆಯಿಡುತ ಬಂದನೋ .  ೭ ದುಷ್ಟ ದರ್ಪ ಕಳೆವನೀತ ಅಂದ ಸೌಂದರ್ಯ ನೇಮಿ ಶಿಷ್ಟ ಜನಕೆ ಮೋದವೀವ ಪುಟ್ಟ ವಾಮನ ಬಂದನೋ. ೮ ಸಕಲ ವೇದಧರನು ರಮೆಯ ಧರನು ವ್ರಜದ ಕಾಂತಿ ಧರನು ಸಕಲ ಕಾಂತಿ ಮೂಲ ಶ್ರೀಧರನು ಬಂದ ಬನ್ನಿರೋ.  ೯ ಇಂದ್ರಿಯಂಗಳೀಶ ತರಣಿ ಬಿಂಬದೊಳಗೆ ಇವನ ಕೇಶ ಇಂದ್ರಿಯಂಗಳನ್ನು  ಸೆಳೆವ ಹೃಷಿಕೇಶ ಬಂದನು .  ೧೦ ಪದ್ಮ ನಾಭಿಯಲ್ಲಿ ಧರಿಪ ಪದ್ಮಪ್ರಿಯನ  ಸದೃಶಕಾಂತಿ ...

GARUDANA HEGALERI HORATANU

ಗರುಡನ ಹೆಗಲೇರಿ ಹೊರಟಾನೊ ದೇವನು  ಸರುವರಿಗಿಷ್ಟಾರ್ಥ ಕೊಡಲೆಂದು ಕುಂಡಿನ ಪುರದಲ್ಲಿ ಚೆಲುವೆ ರುಕ್ಮಿಣಿಯ ಕಂಡು ವರಿಸಲು ರಾಜರು ಬಂದಿರಲು ದಂಡಿಸಿ ಅವರನ್ನು ನಿಜಸತಿಯ ಕೂಡಲು ಅಂಡಜಜನಕನು ಸಿಂಗರಿಸಿಕೊಳ್ಳುತ್ತಾ.         ೧ ದೇವಮಾತೆ ಸುತನೊಡನೆ ಮೊರೆಯಿಡಲು ದೇವದೇವನು ನರಕನ ವಧಿಸಲು ದೇವಪ ಸತಿಯಳ ಗರ್ವವ ಮುರಿಯಲು ದೇವ ವೃಕ್ಷವ ತಂದು ಭಾಮೆಯ ಒಲಿಸಲು.   ೨ ಸಕಲ ಸುರರು ಸಂಭ್ರಮದಿ ಸೇರಿರಲು ಬಕುಲೆಗಿತ್ತಂಥ ಮಾತನ್ನು ನಡೆಸಲು ಸಕಲರ ಜನನಿಯ ಪದುಮೆಯ ವರಿಸಲು ಲಕುಮಿನಲ್ಲನು ತಾ ಸಡಗರದಿಂದಲಿ.           ೩ ಕರಿಯ ಮಕರಿಯು ಪಿಡಿದು ಪೀಡಿಸುತಿರೆ ಪರಿಪರಿ ಸ್ತುತಿಯ ರಚಿಸಿ ಪಾಡುತಲಿರೆ ಕರವನೆತ್ತಿ ಜಗದಾದಿ ಶರಣೆನಲು ತ್ವರಿತದಿ ರಕ್ಷಿಸಿ ಬಿರುದನ್ನು ಉಳಿಸಲು.        ೪ ಬಗೆ ಬಗೆ ಜನಗಳು ಧಾವಿಸಿ ಬರುತಿರಲು ಜಗದೋದ್ಧಾರ ನಿನ್ನ ಕಾಣದಾದೆವೆನಲು ಬಗೆ ಬಗೆ ಭೂಷಣ ಮುಕುಟ ಹಾರವ ಧರಿಸಿ ಮಿಗೆ ಹರುಷದಿಂದಲಿ ರಾಘವ ವಿಠಲನು.   ೫

KARUNISO EMMMANU GURURAYA

ಕರುಣಿಸು ಎಮ್ಮನು ಗುರುರಾಯ ಕರುಣಿಗಳರಸನೆ ಪೊರೆವರಿನ್ಯಾರು ವರ ತುಂಗಾ ವಾಸನೆ   ಪರತತ್ವ  ನಿಪುಣನೆ ನರಹರಿ ಭಕುತನೆ       ಶಿರಬಾಗಿ ಬಂದಿಹೆ ಸಿರಿಲೋಲನಾಜ್ಞೆಲಿ    ಮೆರೆವೆ ವೃಂದಾವನದಿ  ವರಗಳನೀಯುತ     ದುರಿತ ಕಳೆದು ನಿತ್ಯ.    1 ಗಜ ತುರಗ ರಥದಲಿ      ನಿಜ ಜನರು ಸೇವಿಸೆ ಭುಜಜಾತರೆಲ್ಲರೂ        ನಿಜ ಪದದಿ ಇರುತಿರೆ ಸುಜನಕುಲೋತ್ತುಂಗ    ಭುಜಗಶಯನದಾಸ ಅಜಸಮ ಸಮಯವ    ನಿಜ ಮತಿಗೆ ತಾರೋ 2 ಅಘರಾಶಿ ಕಳೆಯುತ     ಮಿಗೆ ಹರುಷ ಸುರಿಸುತ ಜಗದೊಳು ಭಕುತರ      ಓಘ ಲಾಲಿಪೆ ನಿತ್ಯ ಅಗಣಿತ ಮಹಿಮನೆ       ರಾಘವ ವಿಠಲನ ಬಗೆಬಗೆ ಮಹಿಮೆಯ     ಹಿಗ್ಗಿ ಕಾಣುವೆ ನಿತ್ಯ.    3

JO JO SHESHADRIVASA LALI PADA

ಜೋಜೋ ಜೋಜೋ ಶೇಷಾದ್ರಿವಾಸ  ಜೋಜೋ ಜೋಜೋ ಹೇ ಶ್ರೀನಿವಾಸ. ಪ ಜೋಜೋ ಭಕ್ತರ ಹೃತ್ಕಂಜವಾಸ ಜೋ ಜೋ ಭೃತ್ಯರ ಭವ ಪರಿಹಾಸ. ಅಪ ಜೋಜೋ ಗುಣಸಾಂದ್ರ ದೋಷವಿದೂರ ಜೋಜೋ ಅಪಗತದೈತ್ಯಕುಭಾರ ಜೋಜೋ ಮಾನಸ ವಚನಕೆ ದೂರ  ಜೋಜೋ ನಿಜಜನ ತಾಪಪರಿಹಾರ  ೧ ಜೋಜೋ ನಿಷ್ಕ್ರಾಂತ ಪ್ರಾಕೃತ ಮೂರ್ತಿ  ಜೋಜೋ ಆಮ್ನಾಯ ಪ್ರಥಿತಸತ್ಕೀರ್ತಿ ಜೋಜೋ ಲಾವಣ್ಯ ಸುಂದರ ಮೂರ್ತಿ ಜೋಜೋ ಶೀತಾಂಶು ಸಾಸಿರ ಕಾಂತಿ  ೨  ಜೋ ಜೋ ಜೋಜೋ ಜೋ ವರದೇಶ  ಜೋ ಜೋ ಜೋಜೋ ಜೋ ಹೃಷಿಕೇಶ ಜೋಜೋ ಮುಕ್ತಾಮುಕ್ತವರ್ಗೇಶ  ಜೋಜೋ ರಾಘವ ವಿಠಲ ಮಧ್ವೇಶ. ೩

MADIVANTARU UNABAHUDANNA

ಮಡಿವಂತರುಣಬಹುದಣ್ಣ  . ಕಡಿ ಕಡಿ ಕಲಿಕಾಲ ಮಡಿದು ಹೋಗಿದೆ ಧರ್ಮ. ಉದಯ ಕಾಲಕೆ ಎದ್ದು ವಾಪಿಕೂಪದಿ ಮಿಂದು ಮದದಿಂದ ಮಡಿಯುಟ್ಟು ಬಿಂಕದಿ ಪೂಜಿಸಿ ಬುಧರ ದುರಿತವ ಜಪಿಸಿ ಕ್ರೋಧಾಹುತಿಗಳ ಹಾಕಿ ಹೃದಯ ಕಲ್ಮಷದಿಂದ ಉಣುವುದು ಮಡಿಯೇ.  ‌ ೧ ಮೌನದ ಸೋಗನು ಹಾಕಿ ಶಿಖೆಯನು ಕೆದರಿ ನಾನೊಬ್ಬ ಶುಚಿಯೆಂದು ಅಶುಚಿ ವಿಷಯಗಳನಾಡಿ ಮಾನವಿದೂರನ ಶೇಷವೆಂಬುದ ಮರೆತು ಮಾನ ರುಚಿಯೊಳು ಇಡುತ ಉಣುವುದು ಮಡಿಯೇ. ೨ ಪಾಕಶೋಧಕ ಹಂಸ ಸ್ಮರಣೆಯು ಮಡಿಯು ಪಾಕದೇವತೆ ವಾಯು ಸಿರಿಹರಿ ಸ್ಮೃತಿ ಮಡಿಯು ನೋಕನೀಯನು ಉಂಡು ಬಿಟ್ಟಿದ್ದು ಮಡಿಯು ಸೂಕರಾನ್ನವು ಡಂಭತನದೊಳು ಹಾಕಲು.   ೩ ಪಂಕ್ತಿ ಪಾವನರೊಳು ಉಣುವುದೇ ಮಡಿಯು ಸಕ್ತಿ ಶ್ರೀ ಹರಿಪಾದದೊಳಗಿರೆ ಮಡಿಯು ವಿ ರಕ್ತಿ ಉಳ್ಳವರನ್ನ ಮೆಲುವುದೇ ಮಡಿಯು ಸೂಕ್ತಿಯಿಂದಲಿ ಕರೆದು ಅನ್ನವಿಕ್ಕಲು ಮಡಿಯು.   ೪ ಭೋಗಿಶಯನನ ಭಕುತರಿತ್ತ ಅನ್ನವು ಮಡಿಯು ಬೇಗ ಅನ್ನದ ಅನ್ನ ಅನ್ನಾದ ಸ್ಮೃತಿ ಮಡಿಯು ಗೂಗಿಯಂದದಿ ಹರಿಯ ಕಾಣದ ಮನುಜನ್ನ ರಾಘವ ವಿಠಲ ತಾನು ಮೆಚ್ಚನು ಎಂದಿಗೂ.    ೫

KELE KELE YASHODE

ಕೇಳೆ ಕೇಳೆ ಯಶೋದೆ ನಿನ್ನ ಮಗನ ಚೇಷ್ಟೆಯ‌     ವ್ಯಾಳೆ ವ್ಯಾಳೆಗೆ ಕೂಡಿ ಸಖರಿಂ ಬರುವ ಚೋರನ ಬೇಡ ಕೃಷ್ಣನೇ ಕೆನೆಯ ಪಾಲದು ಕುಡಿಯದಿರೆಲೋ ಹರಿಗೆ ಮೀಸಲು  ಬೇಡಿಕೊಂಡರೆ ನಗುತಾ ಗೋಪೀ  ಕುಡಿದು ತಾನೆ ದೈವನೆಂದನು.        ೧ ಬರುವ ಚೆಲುವನು ಬೆಣ್ಣೆ ಕದಿವನು ಒರಳ ಮೇಲೆ ಕುಳಿತು ಮೆಲುವ ಪರಮ ಎಂಜಲ ಕೊಡದೆ ಪೋಪನು  ದುರುಳತನದಲಿ ಮರ್ಕಟಕಿಡುವ.     ೨ ಕುದಿವ ಹಾಲನು ಇಡಲು ಗೋಪಿ  ಒದಗಿ ಬಂದು ಕುಡಿವನಮ್ಮ ಉದಧಿ ಮೊಗದೊಳು ಇರುವುದೇನೆ ಚದುರ ಕೃಷ್ಣಗೆ ತಿಳಿಯೆನಮ್ಮ.          ೩ ಕತ್ತಲೆ ಕೋಣೆಲಿ ಗಡಿಗೆ ಬಡಿಯಲು ಮೆತ್ತಗೆ  ಹ್ಯಾಂಗೆ ಹೋಗುವನಮ್ಮ  ಕಿತ್ತೆಸೆದು ಭಾಂಡವ  ಬೆಣ್ಣೆ ಮೆಲುವ  ನೇತ್ರದಿ ತರಣಿ ಶಶಿಗಳಿಹರೆ.             ೪ ಹಿಂದಿನಿಂದಲಿ ಪಿಡಿಯಲೋಸುಗ  ಮಂದಗತಿಯಲಿ ಬರಲು ನಾನು  ಮಂದಹಾಸವ ಸೂಸಿ ಓಡಿದ  ಕಂದ ನಿನ್ನಯ ವಿಶ್ವನೇತ್ರನೆ .         ೫ ಒಂದು ಕರದಲಿ ಗಡಿಗೆ ಒಡಿವನು  ಒಂದು ಕರದಲಿ ಘಂಟೆ ಪಿಡಿವನು ಒಂದು ಕರದಲಿ  ಬೆಣ್ಣೆ ಮೆಲುವನು ಒಂದು ಕರದಿಂದ ಸಖರಿಗಿಡುವ.      ೬ ಬಿಗಿಯಲೇನೇ ಕಂಬಕಿವನ  ಅಗಮ್ಯ ಮಹಿಮನು ಕಂಬ ಸೆಳೆವನು ನಗುತ ಸಕಲರ ಮನವ ಸೆಳೆವನು...

TEPPADOLIPPA APPANE KAYO

ತೆಪ್ಪ ದೊಳಿಪ್ಪ    ಅಪ್ಪನೇ ಕಾಯೋ  ತಪ್ಪುಗಳೊಪ್ಪಿ  ಕಂದರ್ಪನಯ್ಯ.  ಕಾಲಕಾಲಕ್ಕೆ ಏಳದ ತಪ್ಪು  ಕಾಲಕಾಲಕ್ಕೆ ಸಂಧ್ಯೆ ಮಾಡದ ತಪ್ಪು  ಕಾಲಕಾಲಕ್ಕೆ  ಗುರುಹಿರಿಯರ ನೋಡದಾ ತಪ್ಪು ಕಾಲಕಾಲಕ್ಕೆ ಕಾಲನ ನೆನೆಯದ ತಪ್ಪು.                ೧ ಜಪ ಮಾಡದ ತಪ್ಪು ತಪ ಮಾಡದ ತಪ್ಪು  ವಿಪಗಮನನ ಸುಲಭ ಪೂಜೆ ಮಾಡದ ತಪ್ಪು ಅಪವರ್ಗದೊಡೆಯಗೆ ನಮಿಸಿ ಭಾಗದ ತಪ್ಪು ಉಪಮೆ ರಹಿತನ ಕಥೆಯ ಎಂದು ಕೇಳದ ತಪ್ಪು. ೨ ಕುಪಿತನಾಗಿ ಶಿಷ್ಟರ ಜರಿಯುವ ತಪ್ಪು  ಕುಪಥಗಾಮಿಗಳ ಅನುಸರಿಸುವ ತಪ್ಪು  ಸುಪಥ ತೋರ್ವರ ಅಣಕಿಸೊ ತಪ್ಪು ಕಪಟತನದೊಳು ನಿತ್ಯ ಮೆರೆಯುವ ತಪ್ಪು.         ೩ ಕಾರ್ಯಾಕಾರ್ಯವ ತಿಳಿಯದ ತಪ್ಪು  ಕಾರ್ಯಕೃತ್ಯವ ಮರೆಯುವ ತಪ್ಪು ಅ ಕಾರ್ಯ ಕೈಗೊಳ್ಳುವಾಗ ಲಜ್ಜೆ ಇರದ ತಪ್ಪು ಕಾರ್ಯಗಳ ನಾನೇ ಮಾಳ್ಪೆ ನೆನುವ ತಪ್ಪು.         ೪ ಕರಿವರವರದನೆ ಪ್ರಹ್ಲಾದವರದನೆ ಧರುಮ ವ್ಯಾಧಗೆ ಒಲಿದ ಹದ್ದಿಗೆ ಒಲಿದನೆ ಪರಿಪರಿಯಲ್ಲಿ ಕರವ ಮುಗಿದು ಬೇಡುವೆ ಎನ್ನ  ಪರಮಪುರುಷ  ಸಲಹೋ ರಾಘವ ವಿಠಲಯ್ಯ.  ೫

VAJRADHARIYE SHRE KRISHNA

ವಜ್ರ ಧಾರಿಯೇ ಶ್ರೀಕೃಷ್ಣ ನಮಿಪೇನು  ವಜ್ರ ಲೇಪದ ಪಾಪದಿಂದಲಿ ಸಲಹೋ ವರ್ಜನ ಮಾಡಿಹೆ ದೋಷಗಳ ವಜ್ರನೆ ಭರ್ಜನಗೈಯೆಲೋ  ದುರಿತ  ಕಡಲೆಯ ರಾಶಿ ಗರ್ಜಿಸುತಿಹೆ ವೇದ ನಿನ್ನಯ ಗುಣಗಳ ತರ್ಜಿಸು ಆಂತರ ದಿತಿಜರ ಕ್ಷಿಪ್ರದಿ.                    ದುರ್ಜನ ಸಂಗವ ಬಿಡಿಸಿ ಸುಜನರೋಳ್ ಇಡು ನಿತ್ಯ ನಿಜ ಮಹಿಮೆ ಚಿತ್ತಕೆ      ಅಜನಾ ಪಿತನೆ ತಾರೋ ಕುಜ ಹರನೇ ಬೇಡುವೆ   ಭಜಿಸುವ ಮತಿಯ ನಿತ್ತು ವಿಜಯಸಾರಥಿ ಕಾಯೋ ನಿಜ ಜನರ ದಾಸರ.  ಅನ್ಯ ಕ್ಷೇತ್ರದ ಪಾಪ ಪುಣ್ಯ ಕ್ಷೇತ್ರದಿ ನಾಶ  ಪುಣ್ಯ ಕ್ಷೇತ್ರದ ಪಾಪ ಕೃಷ್ಣ ಕ್ಷೇತ್ರದಿ ನಾಶ ಇನ್ನು ವಜ್ರದ ಲೇಪ ಕೃಷ್ಣ ಕ್ಷೇತ್ರದ ಪಾಪ ಮಾನ್ಯ ಶ್ರೀ ರಾಘವ ವಿಠಲ ಧರಿಸಿ ತೋರ್ದ.   

TAPPADE NAMISELO HARICHARANA

ತಪ್ಪದೇ ನಮಿಸೆಲೊ  ಹರಿ ಚರಣ ಕಮಲವ  ತಪ್ಪು ಸಾಸಿರ ಒಪ್ಪಿ ಕಡುಕರುಣಿ ಕಾಯ್ವನು ಹತ್ತು ಅಶ್ವಮೇಧಗಳ ಮಾಡಿದ ಮ್ಯಾಲೂ  ಮತ್ತೆ ಧರೆಗೆ ಬಂದು ಪುಟ್ಟಲಿ ಬೇಕು ಚಿತ್ತಜನಯ್ಯನ ಭಕುತಿಲಿ ನಮಿಸಲು ಇತ್ತು ಮೋಕ್ಷದ ಸುಖ ಎಂದಿಗೂ ಸಲಹುವ                ೧ ಶಿರಬಾಗಿ ಮನದಲ್ಲಿ ಹರಿಯ ನೆನೆಯುತ್ತ ಸತತ ಕರಮುಗಿದು ದೃಷ್ಟಿಯ ಹರಿರೂಪದಿ ನೆಲೆಸುತ್ತ ಉರಸನ್ನೆ ಧರೆಗಿಟ್ಟು ವಚಸಾ ಸ್ತೋತ್ರವ ಮಾಡಿ ಚರಣ ಮಂಡಿಯ ಚಾಚಿ ಭಾವುಕತನದಲ್ಲಿ                ೨ ಅವಜ್ಞೆಯಿಂದಲೂ ಸರಿ ನಮಿಸಲು ಹರಿಯನ್ನು ಅವನಿಧರ ತಾ ಶಿಶುಪಾಲಹರನು ಕಾಯ್ವ ಭುವನ ಸುಂದರನ ಪದವ ನಮಿಸದಿರಲು ಮತ್ತೆ ಅವನ ಸೆಳೆದು ತನ್ನಿ ಎಂದನು ಭಟರಿಗೆ ಯಮನು.     ೩ ನಮೋ ನಮೋ ಅನಿರುದ್ಧ ನಮೋ ನಮೋ ಪ್ರದ್ಯುಮ್ನ ನಮೋ ಸಂಕರುಷಣ ನಮೋ ವಾಸುದೇವನೆ ನಮೋ ಹತ್ತವತಾರನೇ ನಮೋ ಅನಂತ ರೂಪನೆ ನಮೋ ಅಗಣ್ಯ ಮಹಿಮನೆ ನಮೋ ನಮೋ ಎನ್ನುತ ೪ ಗುರು ಅಂತರ್ಯಾಮಿ ಶ್ರೀ ರಾಘವ ವಿಠಲನು  ಗುರುವಾಕ್ಯವಾಲಿಸಿ ನಮಿಪ ಸಜ್ಜನರನ್ನು ಗುರುತರ ಬಾಧೆಯ ಬಿಡಿಸಿ ಮುಕುತಿಯಿತ್ತು ಗುರು ಮೋದ ಉಣಿಸುತ್ತ ಬಿಡದೆ ಪಾಲಿಪ ನಿತ್ಯ.     ೫

GURU MADHWA RAYARIGE NAMO NAMO

ಗುರು ಮಧ್ವರಾಯರಿಗೆ ನಮೋ ನಮೋ ದುರುಳರ ಭಂಜಕಗೆ ನಮೋ ನಮೋ. ಮಧ್ಯಗೇಹಸುತನಿಗೆ ನಮೋ ನಮೋ ಹೃದ್ಯ ಬಾಲರೂಪನಿಗೆ ನಮೋ ನಮೋ ೧ ವಾಸುದೇವ ಆಹ್ವಯಗೆ ನಮೋ ನಮೋ ವಾಸುದೇವ ಭಕ್ತನಿಗೆ ನಮೋ ನಮೋ  ೨ ಮೂಡಿಲ್ಲಾಯ ಮೋಚಕಗೆ ನಮೋ ನಮೋ ಬೇಡಿದ ವರವೀವ ನಮೋ ನಮೋ      ೩ ಬೀಜಪ್ರದಮುಕ್ತಿದಗೆ ನಮೋ ನಮೋ ಕಂಜಜಾತಸಮನಿಗೆ ನಮೋ ನಮೋ   ೪ ಹುರುಳಿಯ ತಿಂದವಗೆ ನಮೋ ನಮೋ ಪರಮಾತ್ಮ ಸಖನಿಗೆ ನಮೋ ನಮೋ  ೫ ಶಿವಭಟ್ಟಗೆಲಿದಗೆ ನಮೋ ನಮೋ ಶಿವಶಕ್ರವಂದ್ಯನಿಗೆ ನಮೋ ನಮೋ     ೬ ಅಹಿಮಣಿಮಂತಕೃತ್ ನಮೋ ನಮೋ ಬಹುಕ್ರೀಡೆಮಾಳ್ಪನಿಗೆ ನಮೋ ನಮೋ ೭ ತಲೆಶೂಲಕಳೆವಗೆ ನಮೋ ನಮೋ ಕುಲಗುರುಜ್ಞಾನದಗೆ ನಮೋ ನಮೋ   ೮ ಪೂರ್ಣಪ್ರಜ್ಞ ಮುನಿವರ ನಮೋ ನಮೋ ಪೂರ್ಣಜ್ಞಾನವಂತನಿಗೆ ನಮೋ ನಮೋ ೯ ಭಾಗವತಗದ್ಯವಕ್ತೃ ನಮೋ ನಮೋ ಭಾಗೀರಥಿ ಮಿಂದವಗೆ ನಮೋ ನಮೋ ೧೦ ಆನಂದತೀರ್ಥರಿಗೆ ನಮೋ ನಮೋ ಆನಂದಶಾಸ್ತ್ರಕೃತು ನಮೋ ನಮೋ     ೧೧ ದುಷ್ಟವಾದಿ ಜಯಿಪಗೆ ನಮೋ ನಮೋ ದುಷ್ಟಭಾಷ್ಯ ಖಂಡಿಪಗೆ ನಮೋ ನಮೋ ೧೨ ವೇದವಿದ್ಯೆಪ್ರಚುರಗೆ ನಮೋ ನಮೋ ವೇದವ್ಯಾಸ ಶಿಷ್ಯರಿಗೆ ನಮೋ ನಮೋ    ೧೩ ಸೂತ್ರ ಭಾಷ್ಯ ರಚಿಪಗೆ ನಮೋ ನಮೋ ಸತ್ಯತೀರ್ಥವರದಗೆ ನಮೋ ನಮೋ     ೧೪  ಕೃಷ್ಣ ಪ್ರತಿಷ್ಠಾಪಕಗೆ ನಮೋ ನಮೋ ಶಿಷ್ಟಜನರಕ್ಷಕಗೆ ನಮೋ ನಮೋ          ೧೫  ಶುದ್ಧಾಚಾರವಂತನಿಗೆ...

INDIRE NAMIPENU

ಇಂದಿರೆ ನಮಿಪೆನು      ಕುಂದುರಹಿತನ ರಾಣಿ ಚೆಂದದಿ ಹರಿ ತಾನು     ಬಂದು ನಿಲ್ಲುವಂತೆ ಮಾಡು ಪ್ರಲಯ ಕಾಲದಿ ಹರಿಯು ಆಲದೆಲೆಯಲಿ ಇರಲು ಜಲ ಮೊದಲು ರೂಪದಿ    ಬಲು ಸೇವೆ ಮಾಡಿದೆ ಇಳೆ ಸಿರಿ ದುರ್ಗೆಯೆ          ಲಲಿತ ಸ್ತುತಿಗಳ ಮಾಡೆ ಜಲಧಿಶಯನನು ಇಹನು  ಕಲುಷರಹಿತಳೆ ವಶದಿ.   ೧ ಆಸನ ಭೂಷಣ               ವಾಸುದೇವಗೆ ತಾನು  ಭಾಸುರವರ್ಣಳೆ              ದಾಸಿ ಸಾಸಿರ ಇರಲು ಭೂಸುರವಂದ್ಯನ            ಸೂಸಿ ಸೇವಿಪೆ ಭಾಗ್ಯೆ ಕೇಶವ ನಿನ್ನೊಳು             ವಾಸಿಪನೊಲುಮೆಲಿ.    ೨ ಮಂಕು ರಾವಣ ತಾನು  ಕೊಂಕು ಮಾತನು ಪೇಳೆ ಲಂಕೆಯ ವನಕಿನ್ನು       ಬೆಂಕಿ ಇರಿಸಿ ಸುತನಿಂ ಬಿಂಕದಿಂದಲಿ ನಿಷ್ಕ       ಳಂಕ ರಾಮನ ಸ್ತುತಿಸಿ ಅಂಕದಿ ಕುಳಿತೆ ಶ         ಶಾಂಕ ಸಾಸಿರ ಶೋಭೆ.     ೩ ಭೈಷ್ಮೀ ತನುವ ನಿನ್ನ             ಕೃಷ್ಣನೊಯ್ಯಲು ಅಸ ಹಿಷ್ಣು ರುಗ್ಮಿಯು ಇಷು      ...

DASARAYA PALAYA GOPALARAYA

ದಾಸರಾಯ ಪಾಲಯ  ಗೋಪಾಲರಾಯ ದಾಸ ದಾಸರ ದಾಸ   ದಾಸ ಎಂದೆನಿಸಿ ನಿತ್ಯ ಹೇಸಿ ವಿಷಯಗಳಲಿ ಘಾಸಿ ಮಾಡದೆ ಎನ್ನ ಒಂದು ಅರಿಯೆನು ನಾನು   ಅಂಧ ಕೂಪದಿ ಇಹೆನು ಮುಂದೆ ದೊಡ್ಡ  ಗಿರಿಯು   ದಂದ ಶೂಕವು ಪ್ರಚುರ ಹಿಂದೆ ದಾರಿಯು ಮಸುಕು ಮುಂದೆ ಕಂಟಕ ಮಾರ್ಗ ಬಂಧು ಬುಧ ಜನಪ್ರಿಯ   ನಿಂದು ನಡೆಸಲಿಬೇಕು.       ೧ ಭವನದೊಳಿಹನೊಬ್ಬ  ಅವನಿಪಾಲನು ಸಮ ಅವಗಿಲ್ಲೆನ್ನುತ             ಅವನಿಧರನ ಮರೆತು ದವದಿ ಷಟ್ಕರಿ ಸಹ      ದ್ರವಗೈವ ತುರಗದಿ ಅವ ಖಟ ಸೇರುವ      ಅವನ ದಯೆಯಲಿ ಮಾಡು.   ೨ ಇಹ ಪರಗತಿ ನೀನೆ        ಕುಹಕ ಬಿಡಿಸಿ ಸುಜನ ಸಹವಾಸದಿರಿಸುತ್ತಾ      ಗಹನಾಬ್ಧಿ ದಾಟಿಸೋ ಸಹಿಸೆನ್ನ ಅವಗುಣ       ಅಹಿಶಯನನೊಲುಮೆಯ ಅಹರಹಃ ದೊರಕಿಸೋ ಅಹೋ ರಾಘವವಿಠಲದಾಸ.೩

NARAYANA DEVA

 ರೂಪಕ ತಾಳ. ನಾರಾಯಣ ದೇವ   ಮತ್ತೆ ಮನೆ ಮಾಡಿದ ನೀರಜಾಕ್ಷನ            ಮಹಿಮೆ ಕೇಳಿರಯ್ಯಾ ಒಂಭತ್ತು ಅಂಗಳ        ತಪನೀಯ ಕುಡ್ಯವು ತುಂಬಿತು ಈರೇಳು      ಉಪ್ಪರಿಗೆಗಳು ಬಾಂಬೊಳೆ ಸ್ವರ್ಣಗಿರಿ  ಚಿತ್ರಾಬ್ಧಿ ದ್ವೀಪಗಳು ಎಂಭತ್ತು ಲಕ್ಷಕಧಿ         ಜಂತು ರೀತಿಗಳು.           ೧  ತರಣಿ ಚಂದಿರ             ದ್ವಿಜ ಮೇಘವಲಯವು ಸರಿತು ನದ ವ್ಯೋಮ    ಹುತವಹ ಮಾರುತ ಧರಣಿಯೊಳು  ಚಿತ್ರ      ಕ್ಷೇತ್ರ ತೀರ್ಥಂಗಳು ಪರಿಪರಿ ಸರ್ಗವ           ಮಾಡಿ ಗತಿಗಳಯೀವ .  ೨ ಮೂರು ಪೊಳೆವ ಕೋಣೆ  ಒಂದು ಕತ್ತಲು ಕೋಣೆ ಸೇರಿಸಿ ವಸ್ತುಗಳ              ಒಪ್ಪ ಓರಣವಾಗಿ ಈರ ತಾತಗೆ                    ರಾಘವ ವಿಠಲನಾಟಕ್ಕೆ  ಸೇರಿ ದಿವಿಜರೆಲ್ಲ              ಕಟ್ಟಿದಂತಹ ಮನೆ.      ೩

VADIRAJA GURUVE NINNA PADA

ವಾದಿರಾಜಗುರುವೇ ನಿನ್ನ ಪಾದ ನಂಬಿ ಬಂದೇ ಎನ್ನ ಬಾಧಿಸುತ್ತಿಹ ತಾಪತ್ರಯದ ಬಂಧ ಬಿಡಿಸಿ ಸಲಹೋ ಮುನ್ನ ಶುಭಮತಿಪಾಲಿಸಿ ಮಾರ್ಗದಿಯಿರಿಸೋ  ಪ್ರಭುವೇ ಪಾದವೆ ಗತಿಯೋ ಎನಗೆ ಉಭಯ ಭ್ರಷ್ಟನೆನಿಸದೆ ಎನ್ನ  ಅಭಯವಿತ್ತು ಕಾಯಬೇಕೋ.                 ೧ ಬಗೆ ಬಗೆ ಭ್ರಮೆಯಲಿ ತಿರುಗುವೆ ನಾನು ಜಗದ ಗುರುವೆ ಕರವ ಪಿಡಿಯೋ ಖಗವರವಾಹನ ಹರಿ ಗೋವಿಂದ ನಿಗೆ ಪ್ರಿಯನಾಗುವ ತೆರದಲಿ ಮಾಡೋ.    ೨ ಗುರವರ ನಿನ್ನಯ ಚರಣವ ತೊರೆದು ಇರದು ಅನ್ಯ ಗತಿಯು ಎನಗೆ ಪರಿಪರಿ ಬಗೆಯಲಿ ಬೇಡುವೆ ನಿನ್ನನು ಪರಿಪಾಲಿಸು ಕೃಪೆಯ ತೋರುತ ಸತತ.    ೩ ಕಲಿಯು ಮನದಲಿ ನಲಿಯುತ್ತಿರಲು ಬಳಲಿ ಬೀಳುವೆ ಭವಬಂಧನದೊಳು ಬಳಸಿ ಬರುತಿಹ ದುರಿತ ಪಾಶಂಗಳ ಅಳಿಸಿ ಕಾಯೋ ನಳಿನೋದ್ಭವನೆ.          ೪ ಕಾಮಧೇನು ಕಲ್ಪವೃಕ್ಷ  ಕಾಮಿತಾರ್ಥ ಭಜಕ ಜನಕೆ ನೇಮದಿಂದಲಿಯಿತ್ತು ಸಲಹೋ ಭೌಮ ರಾಘವ ವಿಠಲನ ಪ್ರೀಯ.          ೫

SRI JAGANATHA DASARU

ಗುರು ಜಗನ್ನಾಥ ದಾಸರ ಪಾದವ ಉರು ಭಕುತಿ ಇಂದಲಿ ಭಜಿಸೆಲೊ ಮನುಜ ವಿಜಯ ರಾಯರ ಪೂರ್ಣ ಕರುಣಾ ಪಾತ್ರರು ಬುಧರು ವಿಜಯ ವಿತ್ತು ಭವವ ದಾಟಿಸಿ ಪೊರೆವರು.  ೧ ಗೋಪಾಲದಾಸರ ಚರಣ ಪದುಮ ಭೃಂಗ ಆಪತ್ತುಗಳ ಹರಿಸಿ ಇರಿಸು ಹರಿಪದ ಸಂಗ.    ೨ ರಂಗನ ಮಂಗಳ ಪದ ಕಂಡ ಸುಭಗನೇ ಭಂಗಗೈದು ಕಾಯೋ ಬಂಧನವಾ.                ೩ ಹರಿಕಥೆ ಸುಧೆಯನು ವಸುಧೆಯೊಳ್ ಹರಡಿದೆ ಹರಿತತ್ವಗಳು ಮನದಿ ಪೊಳೆವಂತೆ ಮಾಡೋ. ೪ ಇವರ ಭಾಗ್ಯವನೆಂತೋ ವರ್ಣಿಸಲಿ ಅಲ್ಪನು ಇವರ ಭಜಿಸಲು ಪೊರೆವ ರಾಘವ ವಿಠಲನು. ೫

SAARI BHAJISIRO VYSARAYAMUNIGALA

ಸಾರಿ ಭಜಿಸಿರೋ ವ್ಯಾಸರಾಯಮುನಿಗಳ ಸೂರಿಜನಗಳ ದಿವ್ಯಮೌಲಿಭೂಷರ. ಮದನಮೋಹನ ಕೃಷ್ಣನನ್ನೇ ಕುಣಿಸಿದ ಪದುಮನಾಭ ಹರಿಯ ಪೂರ್ಣಪ್ರೇಮಪಾತ್ರರ.  ೧ ಪ್ರಾಣಪತಿಯ ದಿವ್ಯಸನ್ನಿಧಾನಪಾತ್ರರ ಪ್ರಾಣಮೂರ್ತಿಗಳನು ಭುವಿಲಿ ಸ್ಥಾಪಿಸಿಪ್ಪರ.     ೨ ನ್ಯಾಯಸಮಯಗರಲದಗ್ಧಜ್ಞಾನಿವರ್ಗವ ನ್ಯಾಯ ಅಮೃತದಿಂದ ಸಲಹಿದಂತ  ಧೀರರ.     ೩ ಸಿದ್ಧಾಂತವಿಪಿನದಲ್ಲಿ ಧ್ವಾಂತಭೀತಜನಗಳ ತಿದ್ದಿ ಚಂದ್ರಿಕೇಯ ತೋರಿ ಪೊರೆದ ಕುಶಲರ.    ೪ ಕರ್ಕಶೋಕ್ತಿಗಳಲಿ ಹರಿಯ ಮಹಿಮೆ ಜರಿಯಲು ತರ್ಕತಾಂಡವನ್ನೇ ರಚಿಸಿ ಕುಟ್ಟಿ ನಲಿದರು.         ೫ ವ್ಯಾಸರಾಯ ವ್ಯಾಸರಾಯ ಎಂದು ಸ್ಮರಿಸಲು ಘಾಸಿಗೊಳಿಸುವಂತ ದುರಿತ ಓಡಿಪೋಪುವು.  ೬ ಮಧ್ವಸಿದ್ಧಾಂತಸಿಂಧುಪೂರ್ಣಚಂದ್ರರ ಬುದ್ಧಿ ಪೂರ್ಣರ ಸಕಲರಿಷ್ಟದಾತರ.                ೭ ಭೂತಪ್ರೇತ ಪೀಡೆ ದೂರ ಸ್ಮರಣ ಮಾತ್ರದಿ ವಾತಪಿತ್ತ ರೋಗವಿಲ್ಲ ಭಜಿಸೆ ಭಕ್ತಿಲಿ.            ೮ ರತ್ನಮಂಚದಿಪ್ಪ ರೂಪ ಸ್ಮರಿಸಿ ಜಪಿಸಲು ರತ್ನ ಮುತ್ತು ವರ್ಷಗೈವ ದೀನಶರಣರ.          ೯ ಪದುಮನಾಭಮಸ್ಕರೀಂದ್ರಸಾಕ್ಷಿಲಿಪ್ಪರ ಬುಧರ ಮಾನಸಾಂಬುಜಾತಸೂರ್ಯಸದೃಶರ. ೧೦ ವೈರಾಗ್ಯಜ್ಞಾನಭಕ್ತಿತುಷ್ಟಿನಿತ್ಯಪೂರ್ಣರ  ಆರಾಧ್ಯ ರಾಘವಾಖ್ಯವಿಠಲ ಪ್ರೇಮಪಾತ್ರರ....

PLAVA

ಪ್ಲವ ಯುಗದ ಪ್ರೇರಕ ಆದಿ ಪುರುಷನು ಯುಗಾದಿಕೃತನು ರಮೆಯ ಅರಸನು ಯುಗದವರ್ತಕನೆಂದು ಕರೆಸುವ ವಿಶ್ವ ನಾಮಕನು. ಯುಗಳದೂರನೆ ದೈತ್ಯರನು ಸಂ ಯುಗದಿ ಓಡಿಸಿ ನಿಜರ ಪಿಡಿ ಮೂರ್ ಯುಗನೆ ನಿನ್ನಯ ಸ್ಮರಣೆ ನೀಡುತ ಎಮ್ಮ ರಕ್ಷಿಪುದು. ನಿಗಮ ಗೋಚರ ಅಚರ ಮಹಿಮನೆ ಸಾಗರಾಂತದಿ ಶಯನ ಮಾಳ್ಪನೆ ಅಗವ ಧರಿಸಿದ ಬಾಲ ಕೃಷ್ಣನೆ ನಮಿಪೆ ಅನುದಿನವೂ. ಭೋಗ ವಿಷಯದಿ ಮನವ ತಪ್ಪಿಸಿ ಯೋಗಿ ಜನಗಳ ಸಂಗ ಮಾಡಿಸಿ ಉಗಮ ರಹಿತನೆ ಸಲಹೊ ದೇವನೆ ಭಕ್ತವತ್ಸಲನೆ. ಪ್ಲವಗ ಮೂರುತಿ  ಹನುಮದೀಶನೆ  ಪ್ಲವನ ಗೈಯುವ ಮನವ ನಿಲ್ಲಿಸಿ ಪ್ಲವಿಕ ಪ್ರವರನ ಪರಮ ಶಾಸ್ತ್ರ ದಿ ರುಚಿಯ ಮಾಡಿಪುದು.  ಭವದ ಅಬ್ಧಿಲಿ ಇಪ್ಪ ಸುಜನರ  ಪ್ಲವದ ತೆರದಲಿ ತ್ವರಿತ ದಾಟಿಸು ಪ್ಲವಸುನಾಮನೆ ಜಗದವೊಡೆಯನೆ ರಾಘವವಿಠಲನೆ

SHUBHAKRUT

 ಶುಭಕೃತ್ ಯುಗದ ಪ್ರೇರಕ ಆದಿ ಪುರುಷನು ಯುಗಾದಿಕೃತನು ರಮೆಯ ಅರಸನು ಯುಗದವರ್ತಕನೆಂದು ಕರೆಸುವ ವಿಶ್ವ ನಾಮಕನು. ಯುಗಳದೂರನೆ ದೈತ್ಯರನು ಸಂ ಯುಗದಿ ಓಡಿಸಿ ನಿಜರ ಪಿಡಿ ಮೂರ್ ಯುಗನೆ ನಿನ್ನಯ ಸ್ಮರಣೆ ನೀಡುತ ಎಮ್ಮ ರಕ್ಷಿಪುದು. ನಿಗಮ ಗೋಚರ ಅಚರ ಮಹಿಮನೆ ಜಗಕೆ ನಾಥನೆ ಸಿಂಧು ಶಯನನೆ ಅಗವ ಧರಿಸಿದ ಬಾಲ ಕೃಷ್ಣನೆ ನಮಿಪೆ ಅನುದಿನವೂ. ಖಗಸುವಾಹನ ಮನವ ಶೋಧಿಸಿ ಬಗೆಬಗೆಮಹಿಮೆ ಚಿತ್ತದಿರುಸುತ ಉಗಮ ರಹಿತನೆ ಸಲಹೊ ದೇವನೆ ಭಕ್ತವತ್ಸಲನೆ. ಶುಭಸುಗುಣಗಣ ಪೂರ್ಣ ಸುಭಗನು ಶುಭವ ನಿರುತದಿ ಮಾಳ್ಪ ಸುಜನಕೆ ಶುಭವ ಛೇದಿಸುತಿಪ್ಪ ಲೀಲೆಲಿ ದುರುಳ ಜನಗಳಿಗೆ ಶುಭವ ಭುಂಜಿಪ ಅಶುಭ ಮುಟ್ಟನು ಶುಭವು ದೇಹವು ಪ್ರಕೃತಿ ದೂರನು ಶುಭದನಾಗಲಿ ಜನಕೆ ಶುಭಕೃತು ರಾಘವವಿಠಲನು

BHARATHI BEDUVE KARAMUGIDU

ಭಾರತಿ ಬೇಡುವೆ ಕರಮುಗಿದು ನಿನ್ನನು ಶ್ರೀರಮಣನ ಗುಣಗಣ ಮತಿಗೆ ಕರುಣಿಸೆ. ನೀನೊಲಿಯಲು ಏಡಮೂಕ ವಾಗ್ಮಿಯು ನೋಡೆ ನೀನೊಲಿಯದಿರೆ ವಾಗ್ಮಿ ಮೂಕನಾಗುವ ಗಡ ಮಾನಸ ವಚನಕೆ ಮಾನಿ ಬೇಡುವೆ ನಿನ್ನ ಮಾನಸದೊಳಗಿದ್ದು ಉಚಿತ ನುಡಿಸೆ ಮುನ್ನ.  ೧ ಭಕುತಿಗೆ ಮಾನಿಯೆ ಶಾಸ್ತ್ರತತ್ವಂಗಳಲಿ ರಕುತಿಯನಿತ್ತು ತೋರಬೇಕಮ್ಮ ಸಕಲದೇವೋತ್ತಮನ ರಾಣೀ ಗೀರ್ವಾಣೀ ಮಕರಕುಂಡಲಧರನ ಪದಭಕುತಿ ಕರುಣಿಸೆ.   ೨ ಹರಿಕಾರ್ಯಸಾಧಕಿ ಹರಿಮನವ ತಿಳಿಯುತ ಕುರುಪ ಬೀಳಲು ನಗುತ ದುರುಳಕುಲವನೆ ತರಿದೆ ಅರಿವು ನೀಡುತ ಎನ್ನ ಬಿಡದೆ ರಕ್ಷಿಸು ತಾಯೆ ಇರಿಸು ರಾಘವ ವಿಠಲನಂಘ್ರಿಲಿ ರತಿಯನು.  ೩

BRASHTANA MADADIRO

ಭ್ರಷ್ಟನ ಮಾಡದಿರೋ ಎನ್ನ ಸ್ವಾಮಿ ಇಷ್ಟದ ದೈವನೆ ಕಷ್ಟವ ಬಿಡಿಸೋ. ಏನೇನು ಯೋನಿಗಳ್ ಕಷ್ಟದಿ ದಾಟುತ ಮಾನವ ಜನುಮವು ಬಹು ದುರ್ಲಭ ಒದಗಿರೆ ಹೀನ ಕೃತ್ಯಗಳೆಸಗಿ ಮೂಢ ನರಕಕೆ ಆದೆ ದೀನ ಜನಗಳ ಬಂಧು ಕರ ಪಿಡಿದು ಕಾಯೋ. ಕರ್ಮದ ಮರ್ಮವ ಅರಿಯದೆ ಕೆಟ್ಟೆನೋ ನಿನ್ನ ವರ್ಮದ ಬಲವನು ಹೊಂದಿಸಿ ಸಲಹೋ ಕರ್ಮಂದಿ ಅರಸನೆ ಕರ್ಮವ ಸವಿಸೋ ಶರ್ಮದೊಳಿರಿಸಿ ಬಿರುದನ್ನು ಉಳಿಸೋ. ಚಿತ್ತದ ವೃತ್ತಿಯು ಬಹುವಿಧವಹುದೋ ಮತ್ತೆ ಪರರ ಜರಿದು ಚಪಲವಚನವಾಡಿ ಅತ್ತಿತ್ತ ತಿರುಗುತ ನೆಲೆಗಾಣದಾದೆನೋ ಚಿತ್ತಜನಯ್ಯನೆ ಕರ ಪಿಡಿದು ಕಾಯೋ. ಸಂಸಾರ ವೀಥಿಯು ಭೀತಿ ಗೋಜಲು ಪೂರ್ಣ  ಕಂಸಾರಿ ಜನಾರ್ದನ ತ್ವರಿತದಿ ಕರುಣಿಸೋ  ಹಿಂಸೆ ಯಮನ ಪುರದಿ ಘೋರ ಬೇಡೆಲೋ ವಿಪ ಅಂಸಗ ದಾರಿಯ ತೋರಿ ಕ್ಷೇಮಕೆ ನಡೆಸೋ. ಆಚಾರವಿಲ್ಲವು ಎನ್ನುತ ಬಿಡದಿರೋ ವಿಚಾರಹೀನನು ಎಂದುಪೇಕ್ಷೆ ಸಲ್ಲದೋ ಆಚಾರ್ಯ ಮಧ್ವರ ವಿಶ್ವಾಸಿ ಎನುತಲಿ ಗೋಚಾರಕನೆ ಕಾಯೋ ರಾಘವ ವಿಠಲನೆ.

ANGARAVARNAM SARVESHAM

ಅಂಗಾರವರ್ಣಂ ಸರ್ವೇಶಂ ತೀಕ್ಷ್ಣ ವೀರ್ಯಂ ರಮಾಪತಿಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೧ ಜಮದಗ್ನಿಸುತಂ ವೀರಂ ಚಂದ್ರವಂಶವಿಭೂಷಣಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೨ ವೀತಿಹೋತ್ರಸಭಾಸಂಸ್ಥಂ ಕಾರ್ತವೀರ್ಯಕುಲಾಂತಕಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೩ ತ್ರಿಃಸಪ್ತಕೃತ್ವಃ ಪೃಥಿವೀಂ ಚರಂತಂ ದುಷ್ಟನಾಶನಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೪ ಸ್ಯಮಂತಪಂಚಕಾಕಾರಂ ಘೋರಂ ಶತ್ರುಭಯಂಕರಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೫ ಜನನೀಸಹಜಾತಾನಾಂ ಶಿರೋಹಾರಿಣಮೀಶ್ವರಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೬ ಜನಕಪ್ರಾಣದಾತಾರಂ ರೇಣುಕಾಭಯನಾಶನಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೭ ತೀರ್ಥಯಾತ್ರಾಕರಂ ರಾಮಚಾಪದಂ ದುಷ್ಟನಾಶಕಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೮ ಭೀಷ್ಮದ್ರೋಣಮುಖೈಃ ಶಿಷ್ಯೈಃ ಸೇವಿತಂ ಕರ್ಣಶಿಕ್ಷಕಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೯ ಶ್ರಾವಕಂ ಕೃಷ್ಣವಾಕ್ಯಾನಾಂ ಸಭಾಯಾಂ ಕೃಷ್ಣಪೂಜಿತಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೧೦ ಭಕ್ತಾಭೀಷ್ಟಪ್ರದಾತಾರಂ ಸ್ವೇಷ್ಟಾನಾಂ ದುರಿತಾಪಹಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೧೧ ಸಂಸಾರತರುಭೇತ್ತಾರಂ ಭಜತಾಂ ಪಾಪಹಾರಿಣಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೧೨ ಬ್ರಹ್ಮರುದ್ರಾದಿಭಿರ್ದೇವೈರ್ವಂದಿತಂ ಲೋಕಪಾಲಕಮ್ ರಾಮಂ ಪರಶುಕೋದಂಡಧಾರಿಣಂ ಪ್ರಣಮಾಮ್ಯಹಮ್.೧೩ ವಿಶ್ವನಂದನಭಿಕ್ಷೂಣಾಂ ಶಿಷ್ಯೇಣಾವರಬುದ್...

SRI BRAHMANYA THEERTHARU

ಗುರುವರ ಪಾಲಿಸೋ ಎಮ್ಮ ನಿರುತದಿ ಕರಪಿಡಿಯುತ ಸನ್ಮಾರ್ಗದಿ ಇರಿಸೋ. ಪುರುಷೋತ್ತಮ ಮುನಿ ಪದಯುಗ ಭಜಕನೆ ಪುರುಷೋತ್ತಮ ಹರಿ ಪದದಲಿ ಇರಿಸೋ ಪುರು ದೋಷಗಳ ಮನದಿಂದಲಪಹರಿಸೋ ಪುರುಹೂತರಿಪುಜಾತ ಚೇಷ್ಟೆಯ ಬಿಡಿಸೋ. ೧ ಘೋರ ವ್ಯಾಧಿಗಳ ಬಾಧೆ ತಪ್ಪಿಸಿ ಕಾಯೋ ಮಾರಪಿತನ ಸೇವೆಗೊಪ್ಪುವಂದದಿ ಮಾಡೋ ಭಾರ ಹಾಕಿರುವೆನೊ ಗುರುವೆ ಮಧ್ವ ಮತದ ಸಾರ ಬೊಧನೆ ಗೈದು ದುರುಳ ಯಾತನೆ ಹರಿಸೋ. ೨ ಬ್ರಹ್ಮಣ್ಯ ಗುರುವರ ವಂದಿಪೆ ಚರಣವ ಹೆಮ್ಮೆಯಿಂದಲಿ ಸೇವೆಗೈಯುವೆ ಭಾಸ್ಕರ ಒಮ್ಮೆಯಾದರೂ ಸಿರಿ ರಾಘವ ವಿಠಲನ ಒಮ್ಮನಸ್ಸಿಂದಲಿ ಭಜಿಪ ಭಾಗ್ಯವನೀಯೋ.  ೩

SHARANU GAJAVADANA

 ತ್ರಿಪುಟ ತಾಳ ಗಣಪತಿ ಶರಣು ಗಜವದನ ಶರಣು ವಿಘ್ನೇಶ್ವರ ಶರಣು ಅಘಹರಣ ಶರಣು ಗಣೇಶ್ವರ ನಮಿಪೆ ಲಂಬೋದರ ನಮಿಪೆ ಆಕಾಶ ಪತಿ ನಮಿಪೆ ರಕ್ತಾಂಬರ ನಮಿಪೆ ರಕ್ತ ಮಾಲ್ಯ ನಮಿಪೆ ಏಕದಂತ ಪಾಶಾಂಕುಶಧರ ನಮಿಪೆ ಶಿವತನಯ ನಮಃ ಕ್ಷಿಪ್ರ ಪ್ರಸಾದ.      ೧ ಸುಮುಖ ಸ್ಕಂದಾಗ್ರಜ ಮೋದಕ ಹಸ್ತ ವಿಮಲ ದೂರ್ವಾರ್ಚಿತ ಮಂಗಳಗಾತ್ರ ಸುಮನಸರೊಳು ಅಗ್ರದಿ ಪೂಜಿತ ಉಮೆ ಶರೀರಜ ವಿದ್ಯಾಪ್ರದಾಯಕ.             ೨ ವಿಘ್ನಗಳೊಡ್ಡುವೆ ದುರುಳ ಜನಕೆ ನಿತ್ಯ  ವಿಘ್ನಗಳ ಕಳೆಯುವೆ ಸುಜನಸ್ತೋಮಕೆ ನಿರುತ ವಿಘ್ನರಾಜನೆ ಶರಣು ಸಿದ್ಧಿ ಮಾರ್ಗದಿ ಇಪ್ಪ ವಿಘ್ನಗಳಳಿಸಯ್ಯ ರಾಘವ ವಿಠಲ ಪ್ರೀಯ.    ೩

BHAGHYAVA NEEDE TAYE BHAGEERATHI

ಭಾಗ್ಯವ ನೀಡೆ ತಾಯೆ  ಭಾಗೀರಥಿ  ಭಾಗ್ಯದಾತನ ಸುತೆ ಕರುಣೆಯ ತೋರೆ ಹರಿಪಾದ ಸಂಭವೆ ಹರಶಿರ ಸಂಗತೆ ಸುರವರ ಸೇವಿತೆ   ಶರಣು ಶರಣೆಂಬೆ ಧರೆಯೊಳು ಸುಜನರ ಪರಿಸರ ಮಜ್ಜನವು ದುರಿತ ಪರ್ವತ ಪವಿ   ಸಿರಿಯರಸ ಒಲಿವಂತೆ.      ೧ ನಿನ್ನ ದರುಶನ ಗೈವ ಜನರ ಪಾಪ ಧ್ವಂಸ ನಿನ್ನ ಜಲದಿ ಸ್ನಾನ ಹರಿಲೋಕ ಸೋಪಾನ ನಿನ್ನ ಸೇವಿಸೆ ನಿತ್ಯ ಸಕಲ ಯಜ್ಞ ಫಲವು ನಿನ್ನ ಸಂಕೀರ್ತನೆ ಪೂತನಿಹ ಪಾತಕಿ.                   ೨ ತಡೆಯಿಲ್ಲದಂತೆ ಸರಿದು ತೃಣಕಾಷ್ಠಗಳ ಸೆಳೆದು ಕಡಲ ಸೇರುವ ತೆರದಿ ಎನ್ನ ಪಾಪಂಗಳ ಬಡಿದು ರಾಘವವಿಠಲನಂಘ್ರಿಯೊಳು ಸತತ ಮನವ  ನಿಡುತ ಸಕಲ ಮಹಿಮೆ ನಿತ್ಯ ಧ್ಯಾನಿಸುವಂತ.       ೩

VARAVEEYE SHRI VARALAKSHMI

 ರಾಗ- ಮೋಹನ                    ತಾಳ- ಆದಿತಾಳ ವರವೀಯೇ ಶ್ರೀ ವರಲಕ್ಷ್ಮೀ ಪರ ವರ ಶ್ರೀ ಹರಿ ಉರದೇಶ ಸಂವಾಸಿ ಚೂರ್ಣ ರಹಿತ ವೀಳ್ಯೆ ಜಗಿದು ಭಕುತಿಯಲಿ ವರ್ಣ ರಕುತ ರಸನವಿರಲು ಸಂಭ್ರಮದಲಿ ಕಾಣುತ ಶುಭದಿನ ಯಜಿಸುವೆ ಪ್ರಥಮದಲಿ ಅಣಿಯಾಗಿ ಹಿರಿಯರ ಆಜ್ಞೆಯಿಂದಲಿ ನಾನು.         ೧ ಶ್ರಾವಣ ಪೌರ್ಣಮಿ ಮುನ್ನ ಭೃಗುವಾಸರ ಭಾವ ಶುದ್ಧದಲಿ ಕಲಶವ ಸ್ಥಾಪಿಸಿ  ಮಾವು ತೋರಣ ಹಾಕಿ ಚಿತ್ರ ರಂಗೋಲಿ ಬಿಡಿಸಿ ಹೂವು ಫಲ ಪತ್ರಂಗಳ ನೇಮದಿ ಸಿದ್ಧವಿರಿಸಿ.          ೨ ನಿತ್ಯ ಕೃತ್ಯವೆಸಗಿ ಯಮುನೆಯನರ್ಚಿಸಿ ಮತ್ತೆ ಕಲಶವ ಗೃಹ ತುಂಬಿಸಿ ಉತ್ತುಂಗ ಮಂಟಪದಿ ಸಿಂಗರಿಸಿ ವೈಭವದಿ ಚಿತ್ತಜನಯ್ಯನ ಮಡದಿಯೆ ಅರ್ಚಿಸುವೆ.                ೩ ಒಂದೇ ಮನದಿ ಧೇನಿಸಿ ಕರೆದು ಮನುಪೂರ್ವದಿ ಇಂದುವದನೆ ಯಜಿಸುವೆ ಉಪಚಾರದಿಂದಲಿ ಸುಂದರಿ ಜಗದೊಳು ಆರತಿ ಬೆಳಗುವೆ  ಕುಂದುಗಳೆಣಿಸದೆ ನಮನ ಸ್ವೀಕರಿಸುತ.                 ೪ ಹರಿವ್ರತ ಹರಿಭಕ್ತಿ ಆಚಾರ ಸಹಿತರ ಕರೆದು ವಿಪ್ರ ಮಿಥುನ ಬಾಗಿನ ದೋರವ ಇರಿಸಿ ಸುಭೋಜನ ಕನಕ ತಾಂಬೂಲವ ಕರದಿ ನಮಿಪೆ ತಾಯೆ ರಾಘವವಿಠಲಪ್ರೀಯೆ.         ೫

BENNE KADIYADIRO

ಬೆಣ್ಣೆ ಕದಿಯದಿರೋ ಹೇ ಕೃಷ್ಣ ಚಿಣ್ಣರ ಕೂಡಿ ಮನೆ ಮನೆಗೆ ಹೋಗಿ ನಂದ ನಂದನ ಕೃಷ್ಣ ಸುಂದರ ಬೇಡುವೆ  ಇಂದಿರೆ ರಮಣನೆ ಕುಂದು  ವಿದೂರನೆ  ಇಂದುಮುಖಿಯಳೇ ಕೇಳೆ ತಿಂದು ಹಾಲ್ ಬೆಣ್ಣೆಗಳ  ಕುಂದು ಕಳೆಯುತ ಮೋಕ್ಷಾನಂದ ಈವೆನೇ ತಾಯೆ.     ೧ ಎಮ್ಮ ಮನೆಯ ಹಾಲು ಬೆಣ್ಣೆ ಸಾಲದೆ ನಿನಗೆ  ಗುಮ್ಮಗೆ ಇಡುವೆನೊ ತುಂಟತನವು ಬೇಡ ಅಮ್ಮ ಸಾಲದೆ ನನಗೆ ಉದರ ಬಹು ಎನಗಿದೋ ಬೊಮ್ಮಾಂಡ ವಿದೆ ನೋಡೆ ಎನ್ನುತ್ತಾ ಬಾಯ ತೆರೆದ.  ೨ ಕಳ್ಳ ಎನ್ನುವರೊ ಕೃಷ್ಣ ಬೇಡವೊ ಚೌರ್ಯವು  ಸುಳ್ಳ ಎನುವರೊ ಮನಕೆ ಖೇದವು ಬಹಳವು ಕಳ್ಳ ಎನ್ನುವರ ಪಾಪ ಕದ್ದು ಗತಿಯ ಕೊಡುವೆ  ಬಲ್ಲಿದ ರಾಘವ ವಿಠಲ ಓಡಿದ ಹೇಳಿ.                      ೩

KADALARATIYA ETTIRE

 ಕದಲಾರತಿಯ ಎತ್ತಿರೆ ಕಡಲಶಾಯಿಗೆ.           ಪ ಮದನಮೋಹನನಿಗೆ  ರಾಧೆಯ ರಮಣಗೆ ಬುಧ ಪದ ಸ್ತುತನಿಗೆ   ವಿಧಿಭವ ಸರ್ವೇಶಗೆ    ಅಪ ಅನಂತ ಪ್ರದೇಶದಲಿ  ಅನಂತ ಕಾಲಕೆ ವ್ಯಾಪ್ತ ಅನಂತ ಜೀವರ ನೇತ ಅನಂತ ಮಹಿಮನೀತ ಅನಂತಾನಂತಗುಣ    ಅನಂತ ಭಕ್ತರ ಗತಿ ಅನಂತ ರೂಪದಿ ಸಮ ಅನಂತ ನಾಮಗೆ ಇಂದು.     ೧ ಅನಂತ ಕಾಯಗೆ ನಮೋ ಅನಂತ ಕಾರ್ಯಗೆ ನಮೋ ಅನಂತ ಜೀವರ ಸಂಘ    ಅನಂತ ಕರ್ಮಂಗಳ ಕಂಡು ಅನಂತ ಫಲಗಳನೀವ     ಅನಂತಾಕಾಶದಿಯಿಪ್ಪ ಅನಂತ ಶಯನಗೆ ಅನಂತ ನಮನ ಪೂರ್ವಕದಿಂದ. ೨ ಅನಂತ ಸಿರಿಕಾಂತ ಶ್ರೀ      ಹನುಮಂತ ಸನ್ನುತ ಅನಂತ ಮನಃ ಪ್ರೇರಕ      ಶ್ರೀಮಂತ ಬಲವಂತ ಅನಂತ ಕರುಣೆಯನಿತ್ತು   ಅನಂತ ದುರಿತವ ಕಳೆದು ಅನಂತ ಸುಖವೀಯುವ ರಾಘವ ವಿಠಲಗೆ.             ೩

VEDAVYSA MADHWA

ವೇದವ್ಯಾಸ ಮಧ್ವಹೃದ್ಗುಹವಾಸ ಬೋಧವೀಯೋ ಶಮ್ಯಾಪ್ರಾಸನಿವಾಸ ಕೀಟ ರಾಜ್ಯ ದಾತನೆ ನಮಿಪೆ ಪದಯುಗ ಪಾಟವದಿಂದ ವೇದ ಬಿಡಿಸಿದ ಧೀರನೆ ಖೇಟಮತಿಮತಗಳ ಆಟೋಪಕಿರಿಸದೆ ಚೇಟಕತನವಿತ್ತು ಕ್ಲೇಶಲೇಶಗಳಳಿಸೋ.                  ೧ ಅನುಪಮ ಮಹಿಮನೆ ಗುಣಗಣನಿಲಯನೆ ಮುನಿವರ ಮಹಿತನೆ ಸಕಲದೋಷಘ್ನನೆ ಅನಿಶ ಸುಜ್ಞಾನ ಅಭಯವ ಕರುಣಿಸೋ ಅನುಮಾನತೀರ್ಥರ ಚಿತ್ತ ಮಂಟಪದೀಡ್ಯ.             ೨ ಪರಮ ಸಂಪದವಿತ್ತು ಪಾಂಡುತನಯರ ಪೊರೆದ ಪರಮಪುರುಷನೊ ಈತ ಸರಳ ಮುನಿಯಲ್ಲವೋ ಪರಮೋಲ್ಲಾಸದಿ ಭಜಿಪ ಸುಜನಸ್ತೋಮಕೆ ನಿತ್ಯ ಪರಮಗತಿಯೀಯುವ ರಾಘವ ವಿಠಲ ಕಂಡ್ಯ.        ೩

PALAYA MAM SATATA KAILASA NILAYA

ಪಾಲಯ ಮಾಮ್ ಸತತ ಕೈಲಾಸ ನಿಲಯ  ಫಾಲಾಕ್ಷ ಬೇಡುವೆ ಗೌರಿ ಮನೋಹರ ವಾಮದೇವ ನಮಿಪೆ ನಿನ್ನನ್ನು  ಸೋಮಶೇಖರ ಗಂಗೆ ಹೊತ್ತವ ವ್ಯೋಮಕೇಶ ವೃಕಾರಿ ನಮಿಪೆನು  ರಾಮ ನಾಮದ ಮಹಿಮೆ ಪೇಳಿದೆ ಈ ಮಹಿಯೊಳಿನ್ನು ಫೋರೆವರ್ಯಾರೊ  ನೇಮದಿಂದಲಿ ಸಲಹೋ ದೇವ ಶ್ಯಾಮಸುಂದರನ ಧ್ಯಾನದೊಳ ಗೀಮನವ ನಿಲ್ಲುವಂತೆ ಮಾಡೋ. ೧ ಭೂರಿಕರುಣನೆ ಆಶುತೋಷನೆ ಮಾರಮಾರನೆ ಸುರರ ಜನಕನೆ ಚಾರುಶೀಲ ವಿರಿಂಚಿ ತನಯನೆ ಈರ ತಾತನ ಶಾಸ್ತ್ರ ಬೋಧಿಸು ಹೇರಂಬತಾತನೆ ಅಂಘ್ರಿಯುಗಳವ ಸಾರಿ ಭಜಿಪೆನೊ ಕರುಣಿ ಲಾಲಿಸು ಪಾರುಗಾಣಿಸು ವೇಗದಿಂದಲ ಪಾರ ಭವದ  ಉಧದಿಯಿಂದಲಿ. ೨ ಅಂಧಕಾರಿ ಪಿನಾಕಿ ಶರ್ವನೆ ಸುಂದರಾಂಗಿ ಗಿರಿಜೆ ರಮಣನೆ ಇಂದುಕಲಧರ ನಾಗಭೂಷಣ ಮುಂದೆ ಶೇಷನೆ ಪಂಚ ಮೊಗದವ ಬೆಂದು ಪೋಗುವೆ ರುಜಿನವನ್ಹಿಲಿ ಬಂಧು ರಕ್ಷಿಸೊ ಅಂತಕಾಖ್ಯನೆ ಬಂದು ಶೀಘ್ರದಿ ಒದಗದಂದಲಿ ನಿಂದು ಕಾರ್ಯವ ಮಾಡಿಸೆನ್ನಲಿ. ೩ ರುದ್ರ ಮುಖ್ಯನೆ ತತ್ವಕೊಡೆಯನೆ ಅದ್ರಿಧರಸತ್ಪೌತ್ರ ವೀರ ಭದ್ರ ರೂಪದಿ ಘೋರ ಮೆರೆಯುತ ಛಿದ್ರ ಗೊಳಿಸಿದೆ ದಕ್ಷ ಮಖವನು ಕ್ಷುದ್ರ ವಿಷಯಂಗಳಲಿ ಮುಳುಗುತ  ಭದ್ರ ಮಾರ್ಗವ ಕಾಣದಾದೆ ಸ ಮುದ್ರ ಶಯನನ ಪಾದ ತೋರಿ ಸು ಭಧ್ರೆ ಅಗ್ರಜ ನಿರುತ ಕಾಯೋ. ೪ ಸರುವವ್ಯಾಪ್ತನೆ ತ್ರಿಪುರಘಾತಕ ವರದ ಶರ್ವನೆ ವೃಷಭವಾಹನ ಚರ ಅಚರ ಸೃಜಿಪ ಹರಿಪನೆ ಪರಮ ವೈಷ್ಣವ ಪ್ರಮಥನಾಥನೆ ಹರನೆ  ಮೃಡನೆ ನಾಟ್ಯ ಕುಶಲನೆ ಎರಡೊಂದು ನೇತ್ರನೆ ಶೂಲಪಿಡಿದನೆ ಪರಮ ಭಕುತಿಯಿಂದ ಬೇಡುವೆ ಇರಿಸು ರಾಘವ ವಿಠಲನ...

KELE KELE YASHODE

ಕೇಳೆ ಕೇಳೆ ಯಶೋದೆ ನಿನ್ನ ಮಗನ ಚೇಷ್ಟೆಯ‌     ವ್ಯಾಳೆ ವ್ಯಾಳೆಗೆ ಕೂಡಿ ಸಖರಿಂ ಬರುವ ಚೋರನ ಬೇಡ ಕೃಷ್ಣನೇ ಕೆನೆಯ ಪಾಲದು ಕುಡಿಯದಿರೆಲೋ ಹರಿಗೆ ಮೀಸಲು  ಬೇಡಿಕೊಂಡರೆ ನಗುತಾ ಗೋಪೀ  ಕುಡಿದು ತಾನೆ ದೈವನೆಂದನು.        ೧ ಬರುವ ಚೆಲುವನು ಬೆಣ್ಣೆ ಕದಿವನು ಒರಳ ಮೇಲೆ ಕುಳಿತು ಮೆಲುವ ಪರಮ ಎಂಜಲ ಕೊಡದೆ ಪೋಪನು  ದುರುಳತನದಲಿ ಮರ್ಕಟಕಿಡುವ.     ೨ ಕುದಿವ ಹಾಲನು ಇಡಲು ಗೋಪಿ  ಒದಗಿ ಬಂದು ಕುಡಿವನಮ್ಮ ಉದಧಿ ಮೊಗದೊಳು ಇರುವುದೇನೆ ಚದುರ ಕೃಷ್ಣಗೆ ತಿಳಿಯೆನಮ್ಮ.          ೩ ಕತ್ತಲೆ ಕೋಣೆಲಿ ಗಡಿಗೆ ಬಡಿಯಲು ಮೆತ್ತಗೆ  ಹ್ಯಾಂಗೆ ಹೋಗುವನಮ್ಮ  ಕಿತ್ತೆಸೆದು ಭಾಂಡವ  ಬೆಣ್ಣೆ ಮೆಲುವ  ನೇತ್ರದಿ ತರಣಿ ಶಶಿಗಳಿಹರೆ.             ೪ ಹಿಂದಿನಿಂದಲಿ ಪಿಡಿಯಲೋಸುಗ  ಮಂದಗತಿಯಲಿ ಬರಲು ನಾನು  ಮಂದಹಾಸವ ಸೂಸಿ ಓಡಿದ  ಕಂದ ನಿನ್ನಯ ವಿಶ್ವನೇತ್ರನೆ .         ೫ ಒಂದು ಕರದಲಿ ಗಡಿಗೆ ಒಡಿವನು  ಒಂದು ಕರದಲಿ ಘಂಟೆ ಪಿಡಿವನು ಒಂದು ಕರದಲಿ  ಬೆಣ್ಣೆ ಮೆಲುವನು ಒಂದು ಕರದಿಂದ ಸಖರಿಗಿಡುವ.      ೬ ಬಿಗಿಯಲೇನೇ ಕಂಬಕಿವನ  ಅಗಮ್ಯ ಮಹಿಮನು ಕಂಬ ಸೆಳೆವನು ನಗುತ ಸಕಲರ ಮನವ ಸೆಳೆವನು...

HARIDASA NENISUVUDU

ಹರಿದಾಸನೆನಿಸುವುದು ಬಹುದುರ್ಲಭವಯ್ಯ ಹರಿದಾಸ ಜಗದೊಳು ಬಹುದುರ್ಲಭವಯ್ಯ ಅರಿಷಡ್ವರ್ಗಗಳ ಜಯವಿರಲಿಬೇಕು  ಹರಿಸರ್ವೋತ್ತಮನೆಂಬ ಅರಿವು ಇರಲಿಬೇಕು ಅರಿ ಮಿತ್ರ ಮಧ್ಯಸ್ಥರೊಳು ಸಮಬುದ್ಧಿ ಇರಲಿಬೇಕು ಹರಿ ಸರ್ವ ಪ್ರೇರಕ ಸರ್ವತಂತ್ರ ಎನಲಿಬೇಕು. ವರ ಮುದ್ರೆಗಳ ಧರಿಸಿ ಹರಿನಾಮ ಪಾಡಲಿಬೇಕು ಹರಿದಿನ ಉಪವಾಸ ಜಾಗರ ಮಾಡಲಿಬೇಕು ಹರಿ ಭಕುತರ ಕೂಡಿ ಸ್ಮರಿಸಿ ಕುಣಿಯಲು ಬೇಕು ಹರಿ ನಿಂದಕರ ಸಂಗ ಮಾಳ್ಪರ ಬಿಡಲಿಬೇಕು. ಹರಿ ಆವ ಕಾಲಕ್ಕೂ ಗತಿಯೆನುತಲಿರಬೇಕು ಹರಿ ಅನ್ಯರ ಭಜನೆ ದೂರ ಮಾಡಲಿಬೇಕು ಹರಿ ಚರಣಯುಗಳವ ಸ್ಮರಿಸುತ್ತಲಿರಬೇಕು ಹರಿದಾಸ ದಾಸರ ಅನುಸರಿಸುತ್ತಿರಬೇಕು. ಕಂಡು ಕಾಣದಂತೆ ಇಪ್ಪ ಹರಿದಾಸ ಎನಿಸನು ಪಂಡಿತರೆಂಬೋರವರ ಬಹು ಹೆಮ್ಮೆ ಪಡುವರ ಭಂಡತನದಲಿ ಹರಿದಾಸರ ದೂಷಿಪರು ದಂಡ ಮಾಳ್ಪರು ಜನುಮ ದಾಸರೆನಿಸುವರೇ. ಮಧ್ವನಾಥಗೆ ಸಮಯಿಲ್ಲ ಎಂಬುವನೇ ದಾಸ ಮಧ್ವರಾಯರ ಉಕ್ತಿ ನಂಬುವವನೇ ದಾಸ ಮಧ್ವಮತದ ಪದ್ಧತಿ ಬಿಡದವನೇ ದಾಸ ಮಧ್ವೇಶ ರಾಘವ ವಿಠಲ ಭಜಕನೇ ದಾಸ.

RAMANA TUGIRO LALI PADA

ರಾಮನ್ನ ತೂಗೀರೋ ರಘುವಂಶತಿಲಕನ್ನ ಶ್ಯಾಮಸುಂದರನ್ನ ತೂಗೀರೋ                   ಪ ನೇಮದಿ ಭಜಿಪರ ಶರಣನ್ನ ತೂಗೀರೋ ಕಾಮ ಜನಕನ್ನ  ತೂಗಿರೋ.                    ಅಪ ಸುಗುಣಭರಿತನ್ನ ದೋಷವಿದೂರನ್ನ ಅಗಣಿತ ಮಹಿಮನ್ನ ತೂಗೀರೋ ಬಗೆ ಬಗೆ ಲೀಲೆಯ ತೋರಿದ ಕರುಣನ್ನ ಜಗದಾದಿಪಾಲನ್ನ ತೂಗೀರೋ.                 ೧ ಪಾವನ ಪಾದನ್ನ ನಾರಿಯ ಪೊರೆವನ್ನ ಪಾವಮಾನಿ ಪ್ರೀಯನ್ನ ತೂಗೀರೋ ಭಾವಗಂಭೀರವಚನನ್ನ ಭೌಮನ್ನ ರಾವಣಾಂತಕನ್ನ ತೂಗೀರೋ.                  ೨ ರಾಮನ್ನ ಮರಕತಶ್ಯಾಮನ್ನ ತೂಗೀರೋ ರಾಮೆಯ ಹೃತ್ಕಂಜಸೂರ್ಯನ್ನ ರಾಮನ್ನ ಲೋಕವ ರಮಿಪನ್ನ ತೂಗೀರೋ ಆ ಮಹಾನಂದನ್ನ ತೂಗೀರೋ.               ೩ ಪರತತ್ವ ಪರಮಾಪ್ತ ಪರದೈವ ನೋಡಿರೋ ಪರಬ್ರಹ್ಮರೂಪನ್ನ ಪಾಡಿರೋ ಪರಗತಿಯಿಪ್ಪನ್ನ ಪರವಾಸುದೇವನ್ನ ಪರಿಪರಿಯಿಂದಲಿ ಬೇಡಿರೋ.                ೪ ಭೋಗಿಯ ಅಗ್ರಜ ಸುಗ್ರೀವ ಮಿತ್ರನ್ನ  ಭಾಗವತರ ಭಾಗ್ಯನ್ನ ನೀಗಿಸು ಬೇಗನೆ ಭವಬಂಧವೆನ್ನುತ  ತೂಗಿರೋ ರಾಘವ ವಿಠಲನ್ನ.         ...

NINTA SRIMANTA SIRIVANTA

ನಿಂತ ಶ್ರೀಮಂತ ಸಿರಿವಂತ ಎಂಥ ಕರುಣಿ ಹನುಮಂತ ಪ್ರಿಯ ನಿಂತ ದಾರಿದ್ರ್ಯ ಬಹುಯಿರಲು ಸುದತಿಯು ಮೊರೆಯಿಡಲು ಮಾರಪಿತನ ಬೇಡಿ ಧನವ ತಾ ಎನುತಿರಲು ಘೋರ ಭವಾಟವಿಯೊಳು ಬಳಲುವ ಜನ ತಾರಕ ಕೃಷ್ಣನ ನೋಡ ಬಂದ ಸಖಗೆ.          ಪಕ್ಕದಾಲಯದಿಂದ ಹರಿಗೆ ಅರ್ಪಿಸಲವ ಲಕ್ಕಿ ಮುಷ್ಠಿಯ ವಸನದೊಳು ಬಿಗಿದು ಒದಗಿರೆ ಚೊಕ್ಕ ದ್ವಾರಕೆ ಪೊಂದಿ ಬೆರಗಾಗಿ ನೋಡಲು ಚಕ್ಕನೆ ನಿಂತನು ಸಖನ ಪೂಜೆಯಗೈದ.       ಗುರುಕುಲವಾರ್ತೆಯ ಸ್ಮರಿಸಿ ಹಿಗ್ಗುತಲಿರೆ ಗುರು ಜಗನ್ನಾಥನು ಪೃಥುಕ ತಂಡುಲವನ್ನೆ ಉರು ಪ್ರೀತಿಯಿಂದಲಿ ಕರದಿ ಕಸಿದು ಮೆದ್ದ ಸಿರಿ ಕರ ಪಿಡಿಯಲಭೀಷ್ಟವರವಿತ್ತ ಕರುಣಿ.   ಎಂದು ಬೇಡನು ಧನವ ರಕ್ತಿರಹಿತರ ಮಣಿ ನೊಂದ ಭಾಮೆಯವಾಕ್ಯ ನಡೆಸಲೋಸುಗ ಇಹನು ಎಂದು ನೀಗದ ಧನವಿತ್ತು ಪೊರೆವೆನು ಎನುತ ನಿಂದು ಧಾವಿಸಿ ಬಂದು ವರಮತಿ ವರವಿತ್ತ.  ಭಕ್ತವತ್ಸಲ ಭಕ್ತರಪರಾಧ ಸಹಿಪನು ಭಕ್ತರಿಪ್ಪುವ ಪತ್ರಫಲ ಒಪ್ಪುವ ಕರುಣಿ ಭಕ್ತರಿಗಿಪ್ಪನು ವಿಫುಲ ಸಂಪದಗಳನು ಭಕ್ತ ಕುಚೇಲಗೆ ರಾಘವ ವಿಠಲನು.   

KANDE JAYARAYARA KANDE

ಕಂಡೆ ಜಯರಾಯರ ಕಂಡೆ ಡಂಡಿ ಪ್ರವರ ನಂದತೀರ್ಥ ದಾಸರ ಕಂಡೆ ವರ ಕಾಗಿನೀತಟ ಶೋಭಿಪ ಯತಿವರ ಹರಿದಾಸರುತ್ತಮ ರಾಮ ಪಾದಾರ್ಚಕ ಸರಿಯಾರು ಕ್ಷಿತಿಯೊಳು ನಿನಗಿನ್ನು ಗುರುವರ ಪರಮ ಕರುಣೆಯಿಂದ ಶರಣರ ಪೊರೆವರ.                 1 ಭವ್ಯ ಸ್ವರೂಪರ ಶರಣರ ಸುರತರು ದಿವ್ಯ ಹರಿಮಹಿಮಾರ್ಕ ಹೃದಯಾಂಬರದಿ ಧರಿಸಿ  ಸವ್ಯಮತಿ ಮತತಮವ ಅಳಿಸಿ ಅತಿಶೋಭಿಪ ಅವ್ಯಯ ನ್ಯಾಯ ಸುಧೆಯ ಬುಧರಿಗೆಯಿತ್ತ.               2 ಜ್ಞಾನ ವಿಜ್ಞಾನಾಬ್ಧಿ ಗುಣರತುನ ಪರಿಪೂರ್ಣ  ಮಾನ ವಿರಕ್ತಿ ಭಕ್ತಿ ಮುಕ್ತಾಫಲ ಗಂಭೀರ  ಮಾನಿಜನ ದುಸ್ತರ ಶೇಷಶಯನನ ಧಾಮ ಮಾನಸ ಶೋಧಿಸಿ ಮಾನದಿಂದಲಿ ಪೊರೆವ.                3 ನಂದತೀರ್ಥರ ವರ ಗಂಭೀರ ಪದಗಳಿಗೆ ಚೆಂದ ಟೀಕೆಯ ರಚಿಸಿ ಭಾವ ಸುಜನಕೆಯಿತ್ತ ಮಿಂದು ಏಳುವ ಜನಕೆ ನಂದಾಪಾರವಯೀವ ಬಂಧ ಕಳೆವ ಗ್ರಂಥ ಜಾತ ಧರೆಗೆ ತಂದ.                      4 ಗುರು ಅಕ್ಷೋಭ್ಯರ ಸನ್ನಿಧಾನದಿಯಿರುವ ಪರಿಪರಿ ಸೇವಿಪ ಜನರ ಉದ್ಧರಿಸುವ ಧರೆಯೊಳು ತಮ್ಮಯ ಶಾಸ್ತ್ರ ರುಚಿಸುವ ಜನಕೆ ಕರೆದು ರಾಘವ ವಿಠಲನಂಘ್ರಿಯೊಳಿಡುವ ದೊರೆಯ. 5

KSHEERABDHI SANJATE

ಕ್ಷೀರಾಬ್ಧಿಸಂಜಾತೆ ತ್ರೈಲೋಕ್ಯಸನ್ಮಾತೆ ಈರಾಖ್ಯಸತ್ಪುತ್ರೆ  ಮಾರಜನನಿ ಖ್ಯಾತೆ ಮಾಯೆ ಜಯೆ ಕೃತಿ ಶಾಂತೆ ಸುರಸನ್ನುತೆ ಶ್ರಿಯೆ ಭೂಮಿ ದುರ್ಗೆಯೆ ತ್ರಿಗುಣನಿಯಾಮಿಕೆ ಜಯಂತಿ ದಕ್ಷಿಣೆ ಅರ್ಚಿ ಸೀತೆ ರುಗ್ಮಿಣಿ ಹರಿ ಪ್ರೀಯೆ ಸತ್ಯ ಭಾಮೆ ಸ್ವರೂಪಳೆ ನಮಿಪೆನು.           ೧ ಪ್ರಲಯಕಾಲದಿ ಹರಿ ಸಾಮೀಪ್ಯವತಿ ಪೊಂದಿ ಜಲ ಪತ್ರ ತಮವಾಗಿ ಬಿಡದಲೆ ಸೇವಿಪೆ ಬಲುವಿಧ ಶೃತಿ ಸ್ತೋಮದಿಂದಲಿ ಪೊಗಳುವೆ ಕಳೆಯಲು ವಿಧಿನಿಶೆ ಪೊಗಳಿ ಪ್ರಬೋಧಿಪೆ.            ೨ ಪುರುಷ ಪ್ರಕೃತಿ ಸೂತ್ರ ಶ್ರದ್ಧಾ ಜನನಿ ನಮಿಪೆ ಪುರುರೂಪದಿಂದಲಿ ಹರಿಯ ಸೇವೆಯ ಗೈವೆ ಪರತಂತ್ರ ಸಮವ್ಯಾಪ್ತೆ ನಿತ್ಯ ಮುಕ್ತೆ ಶಕ್ತೆ ಪರಶುಕ್ಲರೂಪಳೆ ಯೋಗ್ಯ ಪದಸಂಪ್ರದಳೆ.           ೩ ಹರಿಯ ಎರಡೊಂದು ರೂಪದಿಂದಲಿ ಪಡೆಯುವೆ ಹರಿ ವೀರ್ಯವಿಡಲಾಗಿ ಬೊಮ್ಮಾಂಡ ಹಡೆಯುವೆ ಹರಿ ಗುಣ ರೂಪ ಕ್ರಿಯೆ ಗಳ ನಿತ್ಯನೂತನ ಕಂಡು  ಪರಿಪರಿ ಹಿಗ್ಗುವ ಭಾಗ್ಯೆ ಅವಗುಣ ಕಳೆಯೆ.          ೪ ಸಕಲ ವಾಙ್ಮನ ದೇವಿ ಸಕಲಭಾಗ್ಯದಾತೆ ಲಕುಮಿ ಲಕ್ಷಣ ಭರಿತೆ ಭಕುತ ಇಷ್ಟದಾತೆ ಅಕಳಂಕ ಚರಿತಳೆ  ಶಿರಬಾಗಿ ಬೇಡುವೆ ಕೃಕಲೇಶನನು ತೋರೆ ಹೃದಯ ಮಂದಿರದೊಳಗೆ. ೫ ಸ್ವರ್ಣ ಭೂಷಣೆ ಸ್ವರ್ಣವರ್ಣೆ ಸುಗುಣ ಗಣ ಪೂರ್ಣೆ ಋಜುಗಣ ಕರಸೇವಿತ ಚರಣೆ ವರ್ಣ ಸ್ವರ ಪದ ರೂಪ ನಿತ್ಯಾರ್ಣ ಧೇನ...

SANGAVAGALI SADHU SADHAVAGALI

ಸಂಗವಾಗಲಿ ಸಾಧುಸಂಗವಾಗಲಿ ರಂಗನ ದಯದಿ ಭವಭಂಗವಾಗಲಿ. ಸರುವರುತ್ತಮನು ಹರಿ ಎಂಬೋ ಜಾಣರ ಸರುವ ನಿಗಮವೇದ್ಯ ಎಂದು ಸಾರಿ ಪೇಳ್ವರ ಸರುವ ಸುಗುಣಪೂರ್ಣ ದೋಷಲೇಶಹೀನನು ಸರುವ ಶಕುತ ವಶೀ ಎಂದು ಧೈರ್ಯದಿಸಾರುವ.        ೧                ಅಗಣಿತ ಮಹಿಮನು ಸಕಲ ಸೃಜಿಪನು ಜಗವ ಕಾಯ್ವ ಮತ್ತೆ ಲಯವ ಮಾಳ್ಪ ಚತುರನು ಖಗವನೇರಿ ಸುತ್ತ ಪೋಪ ಶೇಷಶಯನನು ಭಗವುಳ್ಳ ಲಕುಮೀನಲ್ಲ ಎಂದು ಪೊಗಳುವ.            ೨ ನಲ್ಲೆ ಲಕುಮೀ ಇವನ ಮಹಿಮೆ ಆವ ಕಾಲಕ್ಕೂ ಬಲ್ಲದಿರಲು ಆವ ಪ್ರಾಣಿ ಮತ್ತೆ ತಿಳಿವನು ಫುಲ್ಲನಯನ ಕುಡಿಯನೋಟ‌ಶಕುತಿಯಿಂದಲಿ ಎಲ್ಲ ಜಗದ ಕಾರ್ಯ ಸಿರಿಯು ಮಾಳ್ಪರೆಂಬರ.          ೩ ಸಕಲ ಜೀವರುತ್ತಮನು ವಾಯುಯೆಂಬರ ಪ್ರಕಟ ಹನುಮ ಭೀಮ ಮಧ್ವ ಮುನಿಯ ಭಕ್ತರ ವಿಕಲಮತಿ ಅವರ ಮತ ದ್ವೇಷ ಮಾಳ್ಪರ ಸಕಲ ಕಾಲದಲ್ಲು ಹರಿಯ ಸ್ಮರಿಸುತಿಪ್ಪರ.                ೪ ಬೊಮ್ಮವಾಯುರುದ್ರಇಂದ್ರ ಮೊದಲು ತ್ರಿದಶರ ಹೆಮ್ಮೆಯಿಂದ ತಾರತಮ್ಯ ತಿಳಿದು ಭಜಿಪರ ಒಮ್ಮನದಿಂದ ಸಕಲ ದಾಸವರ್ಗವ ಉಮ್ಮಯದಿಂದ ಪಾಡಿ ಪೊಗಳಿ ನಲಿವರ.              ೫ ನಿಂದಾಸ್ತುತಿ ಜಯಾಜಯ ಲಾಭಾಲಾಭವ ಎಂದು ಹರಿಯ ವಶವೆಂದು ತಿಳಿದು ನಡೆವರ ಕುಂದು ಬರದಂತೆ ಧರ್ಮ ಮಾಡಿ ನಲಿ...

ELU BHAGAVANTHA ESHTU NIDRE

ಏಳು ಭಗವಂತ ಎಷ್ಟು ನಿದ್ರೆ  ಏಳು ಸಿರಿವಂತ ಎಷ್ಟು ನಿದ್ರೆ ರಮೆಯ ಸ್ತುತಿಯ ಕೇಳಿ ತಮವ ಕುಡಿಯಲು ಬೇಕು ಸಮವ್ಯಾಪ್ತೆ ಸತಿಗಿನ್ನು ನಂದವೀಯಲಿ ಬೇಕು ಸುಮನಸ ಮುಕುತರ ಕೂಡಿ ನಲಿಯಲು ಬೇಕು ತಮವ ಪರಿಣಮಿಸುತ ಜಗವ ಸೃಜಿಸಲಿ ಬೇಕು.           ಅನಂತ ರೂಪದಿ ತಾನು ಜಗವ ನಡೆಸಲಿ ಬೇಕು ಅನಂತ ಪ್ರದೇಶ ಕಾಲ ವಿಶೇಷಗೊಳಿಸಲು ಬೇಕು ತನು ಸಂಯೋಜಿಸಿ ಜೀವರ ತರಬೇಕು ಇನಿತು ಮಹದಾದಿಯ ಸೃಜಿಸಿ ಬೀಗಲಿಬೇಕು.            ಹಿರಣ್ಯಾಂಡವನು ಕಟ್ಟಿ ವ್ಯಾಪಿಸಿಯಿರಬೇಕು ಸರಸಿಜವನೆ ಪಡೆದು ಬೊಮ್ಮನ ಪಡೆಯಲಿಬೇಕು ತರತರ ಸೃಜಿಸುವ ವಿಧಿಯ ನೇಮಿಸಬೇಕು ಪರಮಪಾವನ ಚರಿತೆ ಜಗದಿ ಹರಡಲಿ ಬೇಕು.          ಅಜನ ಒಳಹೊಕ್ಕುತ ಜಗವ ಸೃಜಿಸಲಿ ಬೇಕು ನಿಜರೂಪದಿಂದಲಿ ಜಗವ ಕಾಯಲಿ ಬೇಕು ಅಜಸುತನ ಒಳಹೊಕ್ಕಿ ಜಗವ ಅಳಿಸಲಿ ಬೇಕು ಸುಜನರ ಪೊರೆಯುತ ದುರುಳರ ಗೆಲ್ಲಬೇಕು.          ಪರಿಪರಿ ಭಕುತರ ಪೂಜೆಗ್ರಹಿಸಲು ಬೇಕು ಪರಿಪರಿ ಭಜಿಪರ ದುರಿತ ಕೀಳಲಿಬೇಕು ಪರಿಪರಿ ಗತಿಯನ್ನು ಭಕುತರಿಗಿಡಬೇಕು ಪರಿಸರಪದ್ಧತಿ ರಾಘವ ವಿಠಲ ಏಳು.       

PURANDARA DASARU

ಗುರು ಪುರಂದರ ದಾಸರ ನೀ ಬಿಡದೆ ಭಜಿಸೆಲೋ ಮಾನವ ಉರಿವ ಭವದ ತಾಪತ್ರಯಗಳ ಒಡನೆ ಅಳಿಸುವ ಕರುಣಿಯ ದೇವಗಾಯಕ ಚಿತ್ರ ಮಹಿಮನು ದೇವದೇವನ ಮಹಿಮೆಯ ಆವ ಕಾಲಕು ಬ್ರಹ್ಮ ಸದನದಿ ಚೆಂದ ಪದದಿಂ ಪಾಡುವ ದೇವ ಋಷಿಯು ಹರಿಯ ಆಜ್ಞೆಲಿ ವಸುಧೆಯೊಳು ತಾ ನೆಲೆಸಿದ ಭಾವ ತೋರಿದ ಶಾಸ್ತ್ರ ಕೃತಿಗಳ ದಾಸರಾಯನು ಎನಿಸುತ.  ೧ ಸಕಲ ಲೋಕಗಳಟನ ಮಾಳ್ಪನು ನಿಷ್ಕಳಂಕ ಚರಿತನು ಸಕಲದೇವಕಾರ್ಯಸಾಧಕ ಸಕಲಲೋಕದಿ ಪೂಜಿತ ವಿಕಲ ಮತಿಗಳು ಜರಿದು ಇವರ ಖೇದ ಪಡುವರು ನಿಶ್ಚಿತ ಸಕಲ ಭಾಗ್ಯವನೀವ ನಾರದ ಭುವಿಯೊಳಿಂತು ವಾಸಿಪ. ೨ ವ್ಯಾಸರಾಯರ ಶಿಷ್ಯನೆನಿಸುತ ಮಹಿಮೆ ಬಹುಲ ತೋರುತ ವಾಸುದೇವನೆ ಪರಮ ದೈವನು ಎಂದು ಜಗದಿ ಸಾರಿದ ವ್ಯಾಸದೇವನ ಸೂತ್ರ ತತ್ವವ ಲಲಿತ ಪದದಲಿ ಪಾಡುತ ಬೇಸತ್ತು ಭವದಲಿ ಶರಣು ಹೊಕ್ಕ ನರರ ದಡಕೆ ಹಾಕುವ.   ೩ ಸುರರ ಮುನಿಯು ಭಜಿಸಿ ಕೃಷ್ಣನ ಒಮ್ಮೆ ಇಂತು ಕೇಳಲು ಧರೆಲಿ ದಾಸನು ಆದ ಕಾಲಕೆ ಎನ್ನ ಕೂಡಿ ಕ್ರೀಡಿಸು ಪರಮ ಕರುಣಿ ಪಾಂಡುರಂಗನು ವಿವಿಧ ಕ್ರೀಡೆಯ ತೋರಿದ ವರದ ಶ್ರೀ ಹರಿ ಪೂರ್ಣ ಒಲುಮೆಗೆ ಪಾತ್ರನೆಂದು ‌ಸ್ಮರಿಸುತ.  ೪ ತ್ಯಾಗಿ ವೃಷಭನು ನಿರುತ ಕೃಷ್ಣನ ಭೋಗಿ ಶಯನನ  ಮಹಿಮೆಯ ರಾಗದಿಂದಲಿ ಪಾಡಿಪೊಗಳುತ ಆಗಮಾರ್ಥನ ಕಂಡನು ಜಾಗು ಮಾಡದೆ ಭಜಿಪ ಜನಗಳ ಬೇಗೆ ಸೃತಿಯಲಿ ಕಳೆಯುತ ವೇಗದಿಂದಲಿ ಮನಕೆ ತಂದು ರಾಘವ ವಿಠಲನ ಕೂಡಿಸು.  ೫

SRI VIJAYEENDRA THEERTHARU

 ವಿಜಯೀಂದ್ರತೀರ್ಥರು. ವಿಜಯೀಂದ್ರಸುರತರು ಛಾಯೆಲಿ ಬದುಕಿರೋ ವಿಜಯ ಸಾಧಿಸಿ ಭವಘರ್ಮವ ತೊರೆಯಿರೋ ಕುಂಭಕೋಣದಿ ವರ ಕಾವೇರಿ ತಟದಲ್ಲಿ ಶೋಭಿಪ ನಂದತೀರ್ಥ ಮಹಿಯೊಳ್ ಬೇರೂರಿದ ವೈಭವದಲಿ ವ್ಯಾಸ ಮುನಿ ವೇದಿಯಲಿ ಮೆರೆವ ಅಂಬುಸಿಂಚನಗೈದು ಸುರೇಂದ್ರರು ಬೆಳೆಸಿದ.           ನಾನಾ ವಿದ್ಯಾಶಾಖೆಗಳ ಪಸರಿಸಿ ನಿಂತ ಸಾನುಕ್ರೋಶದಿ ಸುಜನವಿಹಗ ವರ್ಗವ ಪೊರೆವ ಮೌನದಿ ಭಜಿಪರ್ಗೆ ಮುಕ್ತಾಫಲಗಳನಿತ್ತು ಬೇನೆ ಕಳೆವ ಓಷಧಿಗಳನೊಳಗೊಂಡ.                   ಸೇವಿಪ ಜನರಿಗೆ ಇಷ್ಟಾರ್ಥ ವರವೀವ ಭಾವಜನಯ್ಯನ ಮುಟ್ಟಿ ಭಜಿಸುವ ವೃಕ್ಷ ಕೋವಿದರಿಗೆ ಸ್ವಾದು ಗ್ರಂಥಫಲಗಳನೀವ ಪಾವನ ರಾಘವ ವಿಠಲ ನಿಂತು ನಲಿವ.

KATIYALLI KARAVITTANU

ಕಟಿಯಲ್ಲಿ ಕರವಿಟ್ಟೆಯೋ ಕಾರಣವೇನು  ಪಟು ಪಂಢರಿರಾಯ ಸೂಸಿ ಪೇಳೆಲೋ ಈಗ ಅನಾದಿ ಕಾಲದಿ ನಿತ್ಯಾನಂತ ಬ್ರಹ್ಮಾಂಡ ಸೃಜಿಸಿ ಮನಕೆ ಬಂದ ತೆರದಿ ಜೀವಗಣಗಳ  ಕುಣಿಸಿ ಅನುಗುಣ ಫಲಗಳ ಜೀವರಾಶಿಗೆ ಇರಿಸಿ ಅನುಪಮ ಮಹಿಮನೆ ಶ್ರಮದಿಂದಲೇನು ಪ್ರಭುವೇ.   ನಿನ್ನ ಭಜಿಪ ಭಕುತ ಜನರನುಸರಿಸಿ ನಿತ್ಯ ಬನ್ನ ವಿವಿಧ  ಕಳೆದು ಅಮೃತ  ಛಾಯೆಲಿ ಪೊರೆವ ನಿನ್ನ ವ್ರತವ ಸತ್ಯ ಮಾಡಲಾನಂತ ರೂಪ ವನ್ನು ಧರಿಸಿ ಹಿಂದೆ ಹೋಗಿ ಹೋಗಿ ಶ್ರಮವೇ.           ಪರಿ ಪರಿ ಭಕುತರನೇಕ ಸಂಖ್ಯೆಲಿ ನಿತ್ಯ ಚರಣ ದ್ವಂದ್ವವ ಪಿಡಿದು ಶರಣು ಎನ್ನಲು ಸ್ವಾಮಿ ದುರಿತ ತೂಲವ ದಹಿಸಿ ಪಾರುಗಾಣಿಸಿ ಶ್ರಮವೆ ಪರಮ ಪುರುಷನೆ ಕಾಯೋ ರಾಘವ ವಿಠಲನೆ.

SANNA RAYARA STOTRA

 ಯಾಚಿತಂ ಶೇಷವರ್ಯೇಣ ವಿಜಯಾರ್ಯ ಪುನರ್ಭವಮ್ ಡೋಲಾಸ್ಥಂ ರೋಗಹರ್ತಾರಂ ಪುಣ್ಯಾತ್ಮಾನಮಹಂ ಭಜೆ.. ಮಾರ್ಗಸ್ಥಶಿಷ್ಯಸಂಘೇನ ಮಹಾವರ್ಷಭಿಯಾರ್ಥಿತಮ್ ಅಣುರಾಯಂ ಭಜೆ ನಿತ್ಯಂ ವರ್ಷಾದಿಭಯವಾರಕಮ್..

DEEPAVALI STOTRA

 ದೀಪ ನಾಮಕ ಹರಿಯು ಭಕುತ ಜ ನಪಾಲ ಲಕುಮಿ ಲೋಲ ಭಜಿಪರ ತಪ್ಪು ನೋಡದೆ ಬಂದು ಸಲಹುವ ಭಕ್ತವತ್ಸಲನು ಪಾಪ ರಹಿತರ ಭಕುತಿ ಗಳನು ದ್ದೀಪ ಗೊಳಿಸುವ ಕಷ್ಟ ಗಳನು ದ್ದೀಪ ಗೈಸುವ ಪಾಪಿ ಜನಗಳ ರಾಘವವಿಠಲನು.

JAYAVENNIRE HARIGE NITYADALI - DASHAVATHARA

ಜಯವೆನ್ನಿರಿ ಹರಿಗೆ ನಿತ್ಯದಲಿ ಜಯವೆನ್ನಿರಿ ಹರಿಗೆ ಜಯವೆನ್ನಿರಿ. ಮತ್ಸ್ಯರೂಪದಿ ಪ್ರಳಯ ಜಲವನ್ನು ಹೊಕ್ಕಿ ರಮಿಸಿದ ಸುಗುಣನಿಗೆ ಸತ್ಯವ್ರತಗೆ ಮನುಪದ ಕೊಟ್ಟಗೆ ವೇದವ ಮರಳಿ ತಂದವಗೆ.  ಕೂರ್ಮಗೆ ಬೆಟ್ಟ ಬೆನ್ನಲ್ಲಿ ಪೊತ್ತಗೆ ವೀರಗೆ ಸತ್ಯ ಸಂಕಲ್ಪಗೆ ಮರ್ಮ ತಿಳಿಸದೆ ಅಸುರರ್ಗೆ ಸುಧೆಯನ್ನು ತಪ್ಪಿಸಿ ಸುರರ  ಪೊರೆದವಗೆ.  ವರಹರೂಪಿ ದುಷ್ಟನೆಗೊತ್ತಿ ಧರೆಯ ಮೇಲೆತ್ತಿ ಸಲಹಿದಗೆ ವರಕೊಟ್ಟ ವಿಧಿಯ ಮಾತನ್ನು ಮೀರಿದ ತ್ರಿಗುಣಹೀನ ಧೀರನಿಗೆ. ಪ್ರಹ್ಲಾದ ವರದಗೆ ನರಹರಿ ರೂಪಗೆ ದುಷ್ಟನ ಸುಲಭದಿ ಸೀಳಿದಗೆ ಆಹ್ಲಾದ ಜಗದಲ್ಲಿ ತುಂಬಿದ ವೀರಗೆ ನೆನೆವರ ಭಯ ಕಳೆಯುವಗೆ. ವಾಮನರೂಪದಿ ದಾನವ ಬೇಡಿ ಮೂರ್ಜಗವನ್ನೇ ಅಳಿದವಗೆ  ವಾಮದೇವ ಬೊಮ್ಮ ಮೊದಲಾದ ದೇವವೃಂದದಿಂ ನಿತ್ಯ ವಂದಿತಗೆ.  ರಾಮಗೆ ಭೃಗುವಂಶತಿಲಕರೂಪಗೆ ದುಷ್ಟಕ್ಷತ್ರವಂಶ ಕಿತ್ತೊಗೆದಗೆ ಸಾಮದಿಂ ಭಜಿಪರ ಭವತರು ಮೂಲಕ್ಕೆ ಕೊಡಲಿಯನ್ನೇ ಇಟ್ಟವಗೆ. ರಾಮಗೆ ದಶರಥನಂದಗೆ ಲಕ್ಷ್ಮಣನನುಜಗೆ ಮುನಿವೃಂದ ರಕ್ಷಿಪಗೆ ಸೀಮೆಯಿಲ್ಲದ ಮಹಿಮೆವುಳ್ಳಗೆ ರಕ್ಕಸಕುಲದ ಹಂತಕಗೆ. ಸಾಸಿರಸಾಸಿರ ಭಾಮೆಕೈಪಿಡಿದಗೆ ಸಾಸಿರನಾಮಗೆ ಸಿರಿ ಕೃಷ್ಣಗೆ ಸಾಸಿರಜಿಹ್ವೆಯನುಜಗೆ ಚೋರಗೆ ಸಾಸಿರ ದೈತ್ಯರ ಬಡಿದವಗೆ. ಬುದ್ಧಗೆ ದೈತ್ಯರ ಬುದ್ಧಿಯ ಕೊಂದಗೆ ಸತಿಯರ ವ್ರತವ ಕೆಡಸಿದಗೆ ಭೋಧನೆ ಮಾಡ್ದಗೆ ಸುರರೆಲ್ಲ ಬಿಸುಟಿದ ಶಸ್ತ್ರವ ಲೀಲೇಲಿ ನುಂಗಿದಗೆ.  ಕಲ್ಕಿಗೆ ಹಯವೇರಿ ಬಂದವಗೆ ಕಲಿಯ ಶೌರ್ಯವನ್ನು ಮೆಟ್ಟಿದಗ...

GURU RAGHAVENDRA PAHI

ಗುರು ರಾಘವೇಂದ್ರ ಪಾಹಿ ಮಾಂ ಸತತ ಗುರುಕುಲತಿಲಕ  ಗುರು ಸಾರ್ವಭೌಮ ವರ ಲಯ ಕ್ಷೇತ್ರ ನಿವಾಸ ಶರಣಾಗತ ಜನ ಭವಪರಿಹಾಸ ಪರಮತ ಭಂಜನ ಸ್ವಜನೋಲ್ಲಾಸ ಹರಿಶಾಸ್ತ್ರಾಂಭೋಧಿ ಕೃತವಿಲಾಸ. ಧಿಕ್ಕೃತಾಶೇಷ ಮಾಯಿಸಿದ್ಧಾಂತ ಹುಂಕೃತಾಖಿಲ ದುರಿತಕುಧ್ವಾಂತ ನಿಕೃತಭೂಪಾಲ ಸ್ವಜನ ಹೃತ್ಕಾಂತ ಸುಕೃತಿಜನಪಾಲ ವಿಮುಖಸುಖಾಂತ. ಸ್ವಜನ ದುರಿತಹರ ರೋಗಪರಿಹಾರ ಅಜಮತದೂಷಕಕುಜನವಿದೂರ ಭಜಕಸುರತರೋ ಜಿತಮಾಯಿಋರ್ಕಾರ ಗಜವರರಾಘವ ವಿಠಲಪದವಾರಮಂತ್ರಾ

GURUPADA YUGALAVA

ಗುರುಪಾದ ಯುಗಳವ ನಿರುತ ಸ್ಮರಿಸು ಮನವೇ ಗುರುತರ ದುರಿತವು  ಉರಿವುದು ತ್ವರಿತದಿ. ಹರಿ ಕುಪಿತ ನಾಗಲು   ಗುರುಗಳು ಪೊರೆವರು ಗುರು ಕುಪಿತರಾಗಲು  ಹರಿ ಅವರ ನೋಡನು ಗುರು ತತ್ವ ಅರಿತಿಂತು  ಪರಮ ಭಕುತಿಯಿಂದ ಚರಣಕೆ ಶರಣಾಗಿ ಪರಮ ಸುಖವ ಪೊಂದಿ   ೧ ಗುರುದೇವತಾತ್ಮನ  ಎನ್ನ ಭಜಿಸಿ ಎಂದು ತರಳರ ಸಂಘಕೆ ಋಷಭ ಪ್ರೀತಿಲಿ ಪೇಳ್ವ ಗುರುತರಜ್ಞಾನವ ಕಳೆದು ಜ್ಞಾನವನೀವ ಗುರುಗಳ ಸಮರಾರು ಅರಸಿ ನೋಡಲು ಜಗದಿ ೨ ಗುರುಮುಖದರುಶನ ಸರುವ  ಪಾಪ ಧ್ವಂಸ ಗುರುವಾಕ್ಯ ಶ್ರವಣವು ಚಿತ್ತ ತೋಷಕೆ ಕರಣ ಗುರು ಎನ್ನಯ ಪೆಸರ ಕರೆಯೆ ಸುಗ್ಗಿಯು ಹಬ್ಬ ಗುರುಮನದಿರಲಾನು ಅದುವೆ ಪರಮ ಕ್ಷೇಮ ೩ ಆಪಾದ ಗುರುಗಳ ರೂಪ ಸ್ಮರಿಸಲು ನಿತ್ಯ   ಆಪತ್ತು ಬರಲಂಜಿ ಕಾರ್ಯ ಸಾಧನೆ ಸುಲಭ ಸೋಪಾನ ಮುಕುತಿಗೆ ಗುರುಭಕ್ತಿ ಎಂದಿಗು ಆಪವನ ಗುರುಗಳ ಚರಣ ವಂದಿಸು ನಿತ್ಯ  ೪ ಗುರುನಿಂದೆ ಕೇಳದಿರು ಗುರು ಚರಿತೆ ಬಿಡದಿರು ಗುರು ಇಹ ಪರದಲಿ ನಿರುತ ಗತಿಯು ಅನ್ನು ಗುರು ಅಂತರ್ಯಾಮಿ ಶ್ರೀ ರಾಘವ ವಿಠಲನು ಗುರುಪ್ರೀತಿಯಿಂದಲಿ ಒಲಿದು ಪಾಲಿಸುವನು.  ೫

BHANDAVA SHODHISI

 ರೂಪಕ ತಾಳ. ಭಾಂಡವ ಶೋಧಿಸಿ ನಿತ್ಯ ಮನವೆಂಬ ಸುಂದರ ಭಂಡತನದಲಿ ಸತತ ಪಿಂಡಾಂಡ ಸುಖವ ಅರಸಿ ಅಂಡಜವಾಹನ ಉದ್ದಂಡ ಮಹಿಮನ ಮರೆವರೆ ಆಸೆ ಕ್ರೋಧವು ಲೋಭ ಮತ್ಸರ ಮದ ಮೋಹ ಮಾಸದಂತಹ ಮಸಿ ವಜ್ರಲೇಪವಾಗಿರೆ ವಾಸುದೇವನೆ ಹಿರಿದು ತಾರತಮ್ಯೆಂಬೋ ಹಿಟ್ಟು ಕಾಸುಯಿಲ್ಲದೆ ತಂದು ಪರಮ ಯತ್ನದಿ ತಿಕ್ಕಿ.       ೧ ರೂಪ ಯೌವನ ವಿದ್ಯೆ ದ್ರವಿಣ ಸತ್ಕುಲ ಬಲ ಈ ಪರಿ ಮದವೆಂಬೋ ಜಿಗುಟು ಅಂಟಿರಲಾಗಿ ಶ್ರೀ ಪತಿ ದಯದಿಂದ ಒದಗಿಹುದೆನ್ನುವ ಆ ಪರಮ ಸತ್ಯ  ಸೀಗೆಯ ಬಳಸುತ್ತಾ.               ೨ ಸುಳ್ಳು ಶಾಠ್ಯವು ವೈರ  ಪರವನಿತೆ ಪರಧನ ಕಳ್ಳತನವು ನಾನು ನನ್ನದೆಂಬುವ ಮುಸುರೆ ಬಲ್ಲಿದ ಜನರ ಸಂಗವೆಂಬೋ ನಾರನು ಪಿಡಿದು ಬೆಳ್ಳಗಾಗುವ ತನಕ ಫುಲ್ಲನಾಭನ ನೆನೆದು.          ೩ ಹರಿಯ ಭಕುತರ ನಿಂದೆ ನಿಗಮ ಸ್ಮೃತಿಗಳ ನಿಂದೆ ಹರಿಯ ಗುಣರೂಪಕ್ರಿಯೆಗಳಲ್ಲಿ ಭೇದ ಹರಿಯ ಅವತಾರ ವ್ಯತ್ಯಯ ಎಂಜಲು ಬೆರೆಯದಂತಲೆ ಮುನ್ನ ಎಚ್ಚರದಿಂದಲಿ.             ೪ ವೈರಾಗ್ಯ ಕ್ಷಾರಕ್ಕೆ ವ್ರತವೆಂಬೋ ಹುಳಿ ಬೆರೆಸಿ ಕಾರುಣ್ಯ ಜಲದಿ ಶೋಧಿಸಿ ಗುರು ಮಧ್ವ ಸಾರಿದ ಶಾಸ್ತ್ರ ವೆಂಬೋ ಗಾಳಿಗೆ ಹಿಡಿದು ಶ್ರೀ ರಾಘವ ವಿಠಲನ ಪೂಜೆಗೆ ಅಣಿಮಾಡಿ.        ೫

NARASIMHA DEVARU

 ಹಿರಿದು ಮುಖವನೆ ತೆರೆದು ಜಿಹ್ವೆ ಚಾಚಿದ ದೇವ ಸಿರಿಯ ಅರಸನೆ ನರ ಸಿಂಗ ಕಾರಣವೇನೋ. ಪ್ರಲಯ ಕಾಲದಿ ಕುಡಿನೋಟ ವಹ್ನಿ ಗೆ ಸಿಲುಕಿ ಜಲಜಸಂಭವ ಮೊದಲು ಸುರರ ದೇಹವು ಸುಡಲು ಸುಲಭದಿ ಬಾಯಲಿ ಚಪ್ಪರಿಸಿ ಉಣಲೇನೋ ಪ್ರಲಯ ದೂರವೋ ಸ್ವಾಮಿ ಲೀಲೆ ತಿಳಿಯದೊ ಎನಗೆ. ೧  ಪರಮ ಭಾಗವತರು ಶುದ್ಧ ಭಾವದಿ ನಿತ್ಯ ಪರಿಪರಿಯ ಭಕ್ಷ್ಯ ಸುಭೋಜ್ಯವ ಇಡುತಿರೆ ನಿರುತ ತೃಪ್ತನೆ ನಿತ್ಯಾನಂದನೆ ಪ್ರೀತಿಲಿ ಪರಮಪಾವನ್ನ ಉಣ್ಣುವ ಕಾರಣವೇನೋ.          ೨ ಅನನ್ಯ ಭಕುತಿ ಯಿಂದ ಶರಣಾದ ಸುಜನರ ತನುಮನ ದುರಿತವ ಹೀರುವ ನೆಪವೇನೋ ದಿನಮಣಿಪ್ರಖರಸುತೇಜನೆ ಉಗ್ರನೆ ಎನಗಾವ ಉಪದ್ರವ ಬರದಂತೆ ಕಾಯೋ.             ೩ ದುರುಳ ರಕ್ಕಸ ತಾನೆ ಒಡೆಯನೆಂದರುಹಲು ತರಳನ ಪೀಡಿಸಿ ಅಟ್ಟಹಾಸದಿಯಿರಲು ವಿರಳ ರೂಪದಿ ಕೊಂದು ನಿಜಶರಣು ತಾನೆಂದು ಸರಳ ತತ್ವವ ಜಗದಿ ಸಾರಿ ಪೇಳಲೋ ಏನೋ.      ೪ ಎನ್ನ ಭಕುತರು ಎಂದು ನಷ್ಟರಾಗರು ಪಾರ್ಥ ಇನ್ನು ಮಾತನು ಕೊಡುವೆ ಎಂದು ಚಾಚಿದೆಯೇನೋ ಚೆನ್ನ ಪ್ರಸನ್ನ ಅಸುರಭಂಜನ್ನ ಎನ್ನ ಭಕುತನ ಮಾಡಿ ಕಾಯೋ ರಾಘವ ವಿಠಲ.  ೫

KANDE NA VYKUNTA CHELUVANA

 ರೂಪಕ ತಾಳ. ಕಂಡೆ ನಾ ವೈಕುಂಠ ಚೆಲುವನ.        ಪ ಸಂಕಟಹರನ ವೆಂಕಟರಮಣನ.       ಅಪ ವೃಷಭನ ಭಯದಿಂದ ಋಷಿಗಳ ಪೊರೆದನ ಕೇಸರಿಮಡದಿಗೆ ಸುತನ ಕೊಟ್ಟವನ ಶೇಷಗೆ ಮದವನು ಅಡಗಿಸಿ ಕಾಯ್ದನ ದೋಷವನಳಿಸಿ ವಿಪ್ರಗೆ ನೆರವಾದನ ೧   ರಮೆಯ ಸಂಗಡ ಪ್ರೇಮದಿ ಕಾದನ ತಾಮರಸಭವ ಧೇನುವ ಕಾಯ್ದನ ಜನ್ಮರಹಿತನ ಬಕುಲೆಯ ಸುತನ  ಪದ್ಮೆಯ ಕೂಡಿದ ಕಿರಾತ ರೂಪನ.  ೨ ಮುದುಕಿಯ ವೇಷದಿ ಧರಣಿಯ ಕಂಡನ ಖೇದವನಳಸಿ ಹಿತವ ನುಡಿದನ ಮೋದದಿ ಶುಕನಿತ್ತ ಓದನ ಸವಿದನ ಮೋದತೀರ್ಥರ ಭಕ್ತರ ಕೈಪಿಡಿವನ. ೩ ಸುರರಸಂಘದಿ ಭಾಮೆ ಕೈಪಿಡಿದನ  ಆರುಮಾಸದ ನಿಯಮ ಕೈಗೊಂಡನ ಆರೊಂದು ಗಿರಿಗಳ ಒಡಯ ಶ್ರೀನಾಥನ ಆರೊಬ್ಬ ಸಮನು ಅಧಿಕನಿಲ್ಲದವನ. ೪ ಅಘವಿದೂರನ ನಾರದಪ್ರೀಯನ ಗಂಗೆಯ ಪೆತ್ತ ಚೆಲುವ ಪಾದನ ಸಂಗವ ತ್ಯಜಿಸಿದ ಭಕ್ತರ ಶರಣನ ರಾಘವವಿಠಲನ ದಯಾಸಾಗರನ.   ೫