PALAYA MAM SATATA KAILASA NILAYA
ಪಾಲಯ ಮಾಮ್ ಸತತ ಕೈಲಾಸ ನಿಲಯ
ಫಾಲಾಕ್ಷ ಬೇಡುವೆ ಗೌರಿ ಮನೋಹರ
ವಾಮದೇವ ನಮಿಪೆ ನಿನ್ನನ್ನು
ಸೋಮಶೇಖರ ಗಂಗೆ ಹೊತ್ತವ
ವ್ಯೋಮಕೇಶ ವೃಕಾರಿ ನಮಿಪೆನು
ರಾಮ ನಾಮದ ಮಹಿಮೆ ಪೇಳಿದೆ
ಈ ಮಹಿಯೊಳಿನ್ನು ಫೋರೆವರ್ಯಾರೊ
ನೇಮದಿಂದಲಿ ಸಲಹೋ ದೇವ
ಶ್ಯಾಮಸುಂದರನ ಧ್ಯಾನದೊಳ
ಗೀಮನವ ನಿಲ್ಲುವಂತೆ ಮಾಡೋ. ೧
ಭೂರಿಕರುಣನೆ ಆಶುತೋಷನೆ
ಮಾರಮಾರನೆ ಸುರರ ಜನಕನೆ
ಚಾರುಶೀಲ ವಿರಿಂಚಿ ತನಯನೆ
ಈರ ತಾತನ ಶಾಸ್ತ್ರ ಬೋಧಿಸು
ಹೇರಂಬತಾತನೆ ಅಂಘ್ರಿಯುಗಳವ
ಸಾರಿ ಭಜಿಪೆನೊ ಕರುಣಿ ಲಾಲಿಸು
ಪಾರುಗಾಣಿಸು ವೇಗದಿಂದಲ
ಪಾರ ಭವದ ಉಧದಿಯಿಂದಲಿ. ೨
ಅಂಧಕಾರಿ ಪಿನಾಕಿ ಶರ್ವನೆ
ಸುಂದರಾಂಗಿ ಗಿರಿಜೆ ರಮಣನೆ
ಇಂದುಕಲಧರ ನಾಗಭೂಷಣ
ಮುಂದೆ ಶೇಷನೆ ಪಂಚ ಮೊಗದವ
ಬೆಂದು ಪೋಗುವೆ ರುಜಿನವನ್ಹಿಲಿ
ಬಂಧು ರಕ್ಷಿಸೊ ಅಂತಕಾಖ್ಯನೆ
ಬಂದು ಶೀಘ್ರದಿ ಒದಗದಂದಲಿ
ನಿಂದು ಕಾರ್ಯವ ಮಾಡಿಸೆನ್ನಲಿ. ೩
ರುದ್ರ ಮುಖ್ಯನೆ ತತ್ವಕೊಡೆಯನೆ
ಅದ್ರಿಧರಸತ್ಪೌತ್ರ ವೀರ
ಭದ್ರ ರೂಪದಿ ಘೋರ ಮೆರೆಯುತ
ಛಿದ್ರ ಗೊಳಿಸಿದೆ ದಕ್ಷ ಮಖವನು
ಕ್ಷುದ್ರ ವಿಷಯಂಗಳಲಿ ಮುಳುಗುತ
ಭದ್ರ ಮಾರ್ಗವ ಕಾಣದಾದೆ ಸ
ಮುದ್ರ ಶಯನನ ಪಾದ ತೋರಿ ಸು
ಭಧ್ರೆ ಅಗ್ರಜ ನಿರುತ ಕಾಯೋ. ೪
ಸರುವವ್ಯಾಪ್ತನೆ ತ್ರಿಪುರಘಾತಕ
ವರದ ಶರ್ವನೆ ವೃಷಭವಾಹನ
ಚರ ಅಚರ ಸೃಜಿಪ ಹರಿಪನೆ
ಪರಮ ವೈಷ್ಣವ ಪ್ರಮಥನಾಥನೆ
ಹರನೆ ಮೃಡನೆ ನಾಟ್ಯ ಕುಶಲನೆ
ಎರಡೊಂದು ನೇತ್ರನೆ ಶೂಲಪಿಡಿದನೆ
ಪರಮ ಭಕುತಿಯಿಂದ ಬೇಡುವೆ
ಫಾಲಾಕ್ಷ ಬೇಡುವೆ ಗೌರಿ ಮನೋಹರ
ವಾಮದೇವ ನಮಿಪೆ ನಿನ್ನನ್ನು
ಸೋಮಶೇಖರ ಗಂಗೆ ಹೊತ್ತವ
ವ್ಯೋಮಕೇಶ ವೃಕಾರಿ ನಮಿಪೆನು
ರಾಮ ನಾಮದ ಮಹಿಮೆ ಪೇಳಿದೆ
ಈ ಮಹಿಯೊಳಿನ್ನು ಫೋರೆವರ್ಯಾರೊ
ನೇಮದಿಂದಲಿ ಸಲಹೋ ದೇವ
ಶ್ಯಾಮಸುಂದರನ ಧ್ಯಾನದೊಳ
ಗೀಮನವ ನಿಲ್ಲುವಂತೆ ಮಾಡೋ. ೧
ಭೂರಿಕರುಣನೆ ಆಶುತೋಷನೆ
ಮಾರಮಾರನೆ ಸುರರ ಜನಕನೆ
ಚಾರುಶೀಲ ವಿರಿಂಚಿ ತನಯನೆ
ಈರ ತಾತನ ಶಾಸ್ತ್ರ ಬೋಧಿಸು
ಹೇರಂಬತಾತನೆ ಅಂಘ್ರಿಯುಗಳವ
ಸಾರಿ ಭಜಿಪೆನೊ ಕರುಣಿ ಲಾಲಿಸು
ಪಾರುಗಾಣಿಸು ವೇಗದಿಂದಲ
ಪಾರ ಭವದ ಉಧದಿಯಿಂದಲಿ. ೨
ಅಂಧಕಾರಿ ಪಿನಾಕಿ ಶರ್ವನೆ
ಸುಂದರಾಂಗಿ ಗಿರಿಜೆ ರಮಣನೆ
ಇಂದುಕಲಧರ ನಾಗಭೂಷಣ
ಮುಂದೆ ಶೇಷನೆ ಪಂಚ ಮೊಗದವ
ಬೆಂದು ಪೋಗುವೆ ರುಜಿನವನ್ಹಿಲಿ
ಬಂಧು ರಕ್ಷಿಸೊ ಅಂತಕಾಖ್ಯನೆ
ಬಂದು ಶೀಘ್ರದಿ ಒದಗದಂದಲಿ
ನಿಂದು ಕಾರ್ಯವ ಮಾಡಿಸೆನ್ನಲಿ. ೩
ರುದ್ರ ಮುಖ್ಯನೆ ತತ್ವಕೊಡೆಯನೆ
ಅದ್ರಿಧರಸತ್ಪೌತ್ರ ವೀರ
ಭದ್ರ ರೂಪದಿ ಘೋರ ಮೆರೆಯುತ
ಛಿದ್ರ ಗೊಳಿಸಿದೆ ದಕ್ಷ ಮಖವನು
ಕ್ಷುದ್ರ ವಿಷಯಂಗಳಲಿ ಮುಳುಗುತ
ಭದ್ರ ಮಾರ್ಗವ ಕಾಣದಾದೆ ಸ
ಮುದ್ರ ಶಯನನ ಪಾದ ತೋರಿ ಸು
ಭಧ್ರೆ ಅಗ್ರಜ ನಿರುತ ಕಾಯೋ. ೪
ಸರುವವ್ಯಾಪ್ತನೆ ತ್ರಿಪುರಘಾತಕ
ವರದ ಶರ್ವನೆ ವೃಷಭವಾಹನ
ಚರ ಅಚರ ಸೃಜಿಪ ಹರಿಪನೆ
ಪರಮ ವೈಷ್ಣವ ಪ್ರಮಥನಾಥನೆ
ಹರನೆ ಮೃಡನೆ ನಾಟ್ಯ ಕುಶಲನೆ
ಎರಡೊಂದು ನೇತ್ರನೆ ಶೂಲಪಿಡಿದನೆ
ಪರಮ ಭಕುತಿಯಿಂದ ಬೇಡುವೆ
ಇರಿಸು ರಾಘವ ವಿಠಲನಂಘ್ರಿಲಿ. ೫
Comments
Post a Comment