KANDE JAYARAYARA KANDE

ಕಂಡೆ ಜಯರಾಯರ ಕಂಡೆ
ಡಂಡಿ ಪ್ರವರ ನಂದತೀರ್ಥ ದಾಸರ ಕಂಡೆ

ವರ ಕಾಗಿನೀತಟ ಶೋಭಿಪ ಯತಿವರ
ಹರಿದಾಸರುತ್ತಮ ರಾಮ ಪಾದಾರ್ಚಕ
ಸರಿಯಾರು ಕ್ಷಿತಿಯೊಳು ನಿನಗಿನ್ನು ಗುರುವರ
ಪರಮ ಕರುಣೆಯಿಂದ ಶರಣರ ಪೊರೆವರ.                 1

ಭವ್ಯ ಸ್ವರೂಪರ ಶರಣರ ಸುರತರು
ದಿವ್ಯ ಹರಿಮಹಿಮಾರ್ಕ ಹೃದಯಾಂಬರದಿ ಧರಿಸಿ 
ಸವ್ಯಮತಿ ಮತತಮವ ಅಳಿಸಿ ಅತಿಶೋಭಿಪ
ಅವ್ಯಯ ನ್ಯಾಯ ಸುಧೆಯ ಬುಧರಿಗೆಯಿತ್ತ.               2

ಜ್ಞಾನ ವಿಜ್ಞಾನಾಬ್ಧಿ ಗುಣರತುನ ಪರಿಪೂರ್ಣ 
ಮಾನ ವಿರಕ್ತಿ ಭಕ್ತಿ ಮುಕ್ತಾಫಲ ಗಂಭೀರ 
ಮಾನಿಜನ ದುಸ್ತರ ಶೇಷಶಯನನ ಧಾಮ
ಮಾನಸ ಶೋಧಿಸಿ ಮಾನದಿಂದಲಿ ಪೊರೆವ.                3

ನಂದತೀರ್ಥರ ವರ ಗಂಭೀರ ಪದಗಳಿಗೆ
ಚೆಂದ ಟೀಕೆಯ ರಚಿಸಿ ಭಾವ ಸುಜನಕೆಯಿತ್ತ
ಮಿಂದು ಏಳುವ ಜನಕೆ ನಂದಾಪಾರವಯೀವ
ಬಂಧ ಕಳೆವ ಗ್ರಂಥ ಜಾತ ಧರೆಗೆ ತಂದ.                      4

ಗುರು ಅಕ್ಷೋಭ್ಯರ ಸನ್ನಿಧಾನದಿಯಿರುವ
ಪರಿಪರಿ ಸೇವಿಪ ಜನರ ಉದ್ಧರಿಸುವ
ಧರೆಯೊಳು ತಮ್ಮಯ ಶಾಸ್ತ್ರ ರುಚಿಸುವ ಜನಕೆ
ಕರೆದು ರಾಘವ ವಿಠಲನಂಘ್ರಿಯೊಳಿಡುವ ದೊರೆಯ. 5

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha