SANGAVAGALI SADHU SADHAVAGALI

ಸಂಗವಾಗಲಿ ಸಾಧುಸಂಗವಾಗಲಿ
ರಂಗನ ದಯದಿ ಭವಭಂಗವಾಗಲಿ.

ಸರುವರುತ್ತಮನು ಹರಿ ಎಂಬೋ ಜಾಣರ
ಸರುವ ನಿಗಮವೇದ್ಯ ಎಂದು ಸಾರಿ ಪೇಳ್ವರ
ಸರುವ ಸುಗುಣಪೂರ್ಣ ದೋಷಲೇಶಹೀನನು
ಸರುವ ಶಕುತ ವಶೀ ಎಂದು ಧೈರ್ಯದಿಸಾರುವ.        ೧               

ಅಗಣಿತ ಮಹಿಮನು ಸಕಲ ಸೃಜಿಪನು
ಜಗವ ಕಾಯ್ವ ಮತ್ತೆ ಲಯವ ಮಾಳ್ಪ ಚತುರನು
ಖಗವನೇರಿ ಸುತ್ತ ಪೋಪ ಶೇಷಶಯನನು
ಭಗವುಳ್ಳ ಲಕುಮೀನಲ್ಲ ಎಂದು ಪೊಗಳುವ.            ೨

ನಲ್ಲೆ ಲಕುಮೀ ಇವನ ಮಹಿಮೆ ಆವ ಕಾಲಕ್ಕೂ
ಬಲ್ಲದಿರಲು ಆವ ಪ್ರಾಣಿ ಮತ್ತೆ ತಿಳಿವನು
ಫುಲ್ಲನಯನ ಕುಡಿಯನೋಟ‌ಶಕುತಿಯಿಂದಲಿ
ಎಲ್ಲ ಜಗದ ಕಾರ್ಯ ಸಿರಿಯು ಮಾಳ್ಪರೆಂಬರ.          ೩

ಸಕಲ ಜೀವರುತ್ತಮನು ವಾಯುಯೆಂಬರ
ಪ್ರಕಟ ಹನುಮ ಭೀಮ ಮಧ್ವ ಮುನಿಯ ಭಕ್ತರ
ವಿಕಲಮತಿ ಅವರ ಮತ ದ್ವೇಷ ಮಾಳ್ಪರ
ಸಕಲ ಕಾಲದಲ್ಲು ಹರಿಯ ಸ್ಮರಿಸುತಿಪ್ಪರ.                ೪

ಬೊಮ್ಮವಾಯುರುದ್ರಇಂದ್ರ ಮೊದಲು ತ್ರಿದಶರ
ಹೆಮ್ಮೆಯಿಂದ ತಾರತಮ್ಯ ತಿಳಿದು ಭಜಿಪರ
ಒಮ್ಮನದಿಂದ ಸಕಲ ದಾಸವರ್ಗವ
ಉಮ್ಮಯದಿಂದ ಪಾಡಿ ಪೊಗಳಿ ನಲಿವರ.              ೫

ನಿಂದಾಸ್ತುತಿ ಜಯಾಜಯ ಲಾಭಾಲಾಭವ
ಎಂದು ಹರಿಯ ವಶವೆಂದು ತಿಳಿದು ನಡೆವರ
ಕುಂದು ಬರದಂತೆ ಧರ್ಮ ಮಾಡಿ ನಲಿವರ
ಎಂದು ಕಷ್ಟದಲ್ಲೂ ಧರ್ಮ ಬಿಡದೆ ಮಾಳ್ಪರ.           ೬

ಪಂಚಭೇದ ಸತ್ಯ ಜಗತು ಎಂದು ಅರುಹುವ
ಪಂಚಬಾಣ ವಶಕೆ ಸಿಲುಕದಂಥ ಧೀರರ
ಪಂಚಪ್ರಾಣರಲ್ಲಿ ನಿಂತು ಲೋಕಯಾತ್ರೆಯ
ಪಂಚಮೂರ್ತಿ  ರಾಘವ ವಿಠಲ ಮಾಡ್ವನೆಂಬರ.       ೭

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha