KSHEERABDHI SANJATE

ಕ್ಷೀರಾಬ್ಧಿಸಂಜಾತೆ ತ್ರೈಲೋಕ್ಯಸನ್ಮಾತೆ
ಈರಾಖ್ಯಸತ್ಪುತ್ರೆ  ಮಾರಜನನಿ ಖ್ಯಾತೆ

ಮಾಯೆ ಜಯೆ ಕೃತಿ ಶಾಂತೆ ಸುರಸನ್ನುತೆ
ಶ್ರಿಯೆ ಭೂಮಿ ದುರ್ಗೆಯೆ ತ್ರಿಗುಣನಿಯಾಮಿಕೆ
ಜಯಂತಿ ದಕ್ಷಿಣೆ ಅರ್ಚಿ ಸೀತೆ ರುಗ್ಮಿಣಿ ಹರಿ
ಪ್ರೀಯೆ ಸತ್ಯ ಭಾಮೆ ಸ್ವರೂಪಳೆ ನಮಿಪೆನು.           ೧

ಪ್ರಲಯಕಾಲದಿ ಹರಿ ಸಾಮೀಪ್ಯವತಿ ಪೊಂದಿ
ಜಲ ಪತ್ರ ತಮವಾಗಿ ಬಿಡದಲೆ ಸೇವಿಪೆ
ಬಲುವಿಧ ಶೃತಿ ಸ್ತೋಮದಿಂದಲಿ ಪೊಗಳುವೆ
ಕಳೆಯಲು ವಿಧಿನಿಶೆ ಪೊಗಳಿ ಪ್ರಬೋಧಿಪೆ.            ೨

ಪುರುಷ ಪ್ರಕೃತಿ ಸೂತ್ರ ಶ್ರದ್ಧಾ ಜನನಿ ನಮಿಪೆ
ಪುರುರೂಪದಿಂದಲಿ ಹರಿಯ ಸೇವೆಯ ಗೈವೆ
ಪರತಂತ್ರ ಸಮವ್ಯಾಪ್ತೆ ನಿತ್ಯ ಮುಕ್ತೆ ಶಕ್ತೆ
ಪರಶುಕ್ಲರೂಪಳೆ ಯೋಗ್ಯ ಪದಸಂಪ್ರದಳೆ.           ೩

ಹರಿಯ ಎರಡೊಂದು ರೂಪದಿಂದಲಿ ಪಡೆಯುವೆ
ಹರಿ ವೀರ್ಯವಿಡಲಾಗಿ ಬೊಮ್ಮಾಂಡ ಹಡೆಯುವೆ
ಹರಿ ಗುಣ ರೂಪ ಕ್ರಿಯೆ ಗಳ ನಿತ್ಯನೂತನ ಕಂಡು 
ಪರಿಪರಿ ಹಿಗ್ಗುವ ಭಾಗ್ಯೆ ಅವಗುಣ ಕಳೆಯೆ.          ೪

ಸಕಲ ವಾಙ್ಮನ ದೇವಿ ಸಕಲಭಾಗ್ಯದಾತೆ
ಲಕುಮಿ ಲಕ್ಷಣ ಭರಿತೆ ಭಕುತ ಇಷ್ಟದಾತೆ
ಅಕಳಂಕ ಚರಿತಳೆ  ಶಿರಬಾಗಿ ಬೇಡುವೆ
ಕೃಕಲೇಶನನು ತೋರೆ ಹೃದಯ ಮಂದಿರದೊಳಗೆ. ೫

ಸ್ವರ್ಣ ಭೂಷಣೆ ಸ್ವರ್ಣವರ್ಣೆ ಸುಗುಣ ಗಣ
ಪೂರ್ಣೆ ಋಜುಗಣ ಕರಸೇವಿತ ಚರಣೆ
ವರ್ಣ ಸ್ವರ ಪದ ರೂಪ ನಿತ್ಯಾರ್ಣ ಧೇನಿಪೆ
ಅರ್ಣವ ಸುತೆಯಳೆ ಜಾಣೆ ಎಣೆಗಾಣೆ.                ೬

ತ್ರಿಧಾಮ ಸ್ವರೂಪಳೆ ವಿರಜೆ ಸರ್ವಜ್ಞಳೆ
ರಾಧಾ ಗೋಲೋಕದಿ ದುರಿತ ಕಳೆಯೆ ತಾಯೆ
ಬಾಧೆ ಕಳೆದು ಕಾಯ ಮನವ ಸಂಶೋಧಿಸೆ
ಬೋಧವಿತ್ತು ಕಾಯೆ ರಾಘವ ವಿಠಲ ರಾಣಿ.        ೭

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT