Taanu Bhramisalu Jagave Get link Facebook X Pinterest Email Other Apps - February 26, 2023 ತಾನು ಭ್ರಮಿಸಲು ಜಗವೆ ಭ್ರಮಿಸುವುದೆಂದಮೇಘವು ಚಲಿಸಲು ಗಗನ ಚಲಿಸುವುದೆಂದತಾನು ಚರಿಸಲು ಅಚರ ಚರಿಸುವುದೆಂದಗುಣಪೂರ್ಣ ಚೆಲ್ವ ರಾಘವ ವಿಠಲನೊಳುತನ್ನ ದೋಷಗಳ ಕಾಂಬದೋಷಲೇಶವಿದೂರನೆಂದು ತಿಳಿದುಶೇಷಶಯನನ ಭಜಿಸಲು ಸದೃಶ ಗತಿಯನೀವ. Get link Facebook X Pinterest Email Other Apps Comments
MADIVANTARU UNABAHUDANNA - February 06, 2023 ಮಡಿವಂತರುಣಬಹುದಣ್ಣ . ಕಡಿ ಕಡಿ ಕಲಿಕಾಲ ಮಡಿದು ಹೋಗಿದೆ ಧರ್ಮ. ಉದಯ ಕಾಲಕೆ ಎದ್ದು ವಾಪಿಕೂಪದಿ ಮಿಂದು ಮದದಿಂದ ಮಡಿಯುಟ್ಟು ಬಿಂಕದಿ ಪೂಜಿಸಿ ಬುಧರ ದುರಿತವ ಜಪಿಸಿ ಕ್ರೋಧಾಹುತಿಗಳ ಹಾಕಿ ಹೃದಯ ಕಲ್ಮಷದಿಂದ ಉಣುವುದು ಮಡಿಯೇ. ೧ ಮೌನದ ಸೋಗನು ಹಾಕಿ ಶಿಖೆಯನು ಕೆದರಿ ನಾನೊಬ್ಬ ಶುಚಿಯೆಂದು ಅಶುಚಿ ವಿಷಯಗಳನಾಡಿ ಮಾನವಿದೂರನ ಶೇಷವೆಂಬುದ ಮರೆತು ಮಾನ ರುಚಿಯೊಳು ಇಡುತ ಉಣುವುದು ಮಡಿಯೇ. ೨ ಪಾಕಶೋಧಕ ಹಂಸ ಸ್ಮರಣೆಯು ಮಡಿಯು ಪಾಕದೇವತೆ ವಾಯು ಸಿರಿಹರಿ ಸ್ಮೃತಿ ಮಡಿಯು ನೋಕನೀಯನು ಉಂಡು ಬಿಟ್ಟಿದ್ದು ಮಡಿಯು ಸೂಕರಾನ್ನವು ಡಂಭತನದೊಳು ಹಾಕಲು. ೩ ಪಂಕ್ತಿ ಪಾವನರೊಳು ಉಣುವುದೇ ಮಡಿಯು ಸಕ್ತಿ ಶ್ರೀ ಹರಿಪಾದದೊಳಗಿರೆ ಮಡಿಯು ವಿ ರಕ್ತಿ ಉಳ್ಳವರನ್ನ ಮೆಲುವುದೇ ಮಡಿಯು ಸೂಕ್ತಿಯಿಂದಲಿ ಕರೆದು ಅನ್ನವಿಕ್ಕಲು ಮಡಿಯು. ೪ ಭೋಗಿಶಯನನ ಭಕುತರಿತ್ತ ಅನ್ನವು ಮಡಿಯು ಬೇಗ ಅನ್ನದ ಅನ್ನ ಅನ್ನಾದ ಸ್ಮೃತಿ ಮಡಿಯು ಗೂಗಿಯಂದದಿ ಹರಿಯ ಕಾಣದ ಮನುಜನ್ನ ರಾಘವ ವಿಠಲ ತಾನು ಮೆಚ್ಚನು ಎಂದಿಗೂ. ೫ Read more
SHUBHAKRUT - February 06, 2023 ಶುಭಕೃತ್ ಯುಗದ ಪ್ರೇರಕ ಆದಿ ಪುರುಷನು ಯುಗಾದಿಕೃತನು ರಮೆಯ ಅರಸನು ಯುಗದವರ್ತಕನೆಂದು ಕರೆಸುವ ವಿಶ್ವ ನಾಮಕನು. ಯುಗಳದೂರನೆ ದೈತ್ಯರನು ಸಂ ಯುಗದಿ ಓಡಿಸಿ ನಿಜರ ಪಿಡಿ ಮೂರ್ ಯುಗನೆ ನಿನ್ನಯ ಸ್ಮರಣೆ ನೀಡುತ ಎಮ್ಮ ರಕ್ಷಿಪುದು. ನಿಗಮ ಗೋಚರ ಅಚರ ಮಹಿಮನೆ ಜಗಕೆ ನಾಥನೆ ಸಿಂಧು ಶಯನನೆ ಅಗವ ಧರಿಸಿದ ಬಾಲ ಕೃಷ್ಣನೆ ನಮಿಪೆ ಅನುದಿನವೂ. ಖಗಸುವಾಹನ ಮನವ ಶೋಧಿಸಿ ಬಗೆಬಗೆಮಹಿಮೆ ಚಿತ್ತದಿರುಸುತ ಉಗಮ ರಹಿತನೆ ಸಲಹೊ ದೇವನೆ ಭಕ್ತವತ್ಸಲನೆ. ಶುಭಸುಗುಣಗಣ ಪೂರ್ಣ ಸುಭಗನು ಶುಭವ ನಿರುತದಿ ಮಾಳ್ಪ ಸುಜನಕೆ ಶುಭವ ಛೇದಿಸುತಿಪ್ಪ ಲೀಲೆಲಿ ದುರುಳ ಜನಗಳಿಗೆ ಶುಭವ ಭುಂಜಿಪ ಅಶುಭ ಮುಟ್ಟನು ಶುಭವು ದೇಹವು ಪ್ರಕೃತಿ ದೂರನು ಶುಭದನಾಗಲಿ ಜನಕೆ ಶುಭಕೃತು ರಾಘವವಿಠಲನು Read more
Hiriya Daivavu Jagadi - February 26, 2023 ಹಿರಿದು ದೈವವು ಜಗದಿ ಸಿರಿನಿಲಯನಿರುವಾಗ ಬರಿದು ದೈವಗಳ ಬೆನ್ಹತ್ತುವುದು ಸರಿಯೇ ದುರಿತಕಾನನಕನಲ ಗುರುಜಾತವಿರುವಾಗ ಹರಿಯ ಅರಿಯದ ಭೈರವಿಗಳು ಸರಿಯೇ ಹರನ ವೃಕನಿಂದ ಸಲುಹಿದ ಹೆದ್ದೈವ ಸಿರಿ ರಾಘವ ವಿಠಲನ ಚರಣ ದ್ವಂದ್ವಗಳ ಅರಿತು ಭಜಿಸೆಲೋ ಕಷ್ಟಗಳ ಕಳೆವ. Read more
Comments
Post a Comment