SAARI BHAJISIRO VYSARAYAMUNIGALA

ಸಾರಿ ಭಜಿಸಿರೋ ವ್ಯಾಸರಾಯಮುನಿಗಳ
ಸೂರಿಜನಗಳ ದಿವ್ಯಮೌಲಿಭೂಷರ.

ಮದನಮೋಹನ ಕೃಷ್ಣನನ್ನೇ ಕುಣಿಸಿದ
ಪದುಮನಾಭ ಹರಿಯ ಪೂರ್ಣಪ್ರೇಮಪಾತ್ರರ.  ೧

ಪ್ರಾಣಪತಿಯ ದಿವ್ಯಸನ್ನಿಧಾನಪಾತ್ರರ
ಪ್ರಾಣಮೂರ್ತಿಗಳನು ಭುವಿಲಿ ಸ್ಥಾಪಿಸಿಪ್ಪರ.     ೨

ನ್ಯಾಯಸಮಯಗರಲದಗ್ಧಜ್ಞಾನಿವರ್ಗವ
ನ್ಯಾಯ ಅಮೃತದಿಂದ ಸಲಹಿದಂತ  ಧೀರರ.     ೩

ಸಿದ್ಧಾಂತವಿಪಿನದಲ್ಲಿ ಧ್ವಾಂತಭೀತಜನಗಳ
ತಿದ್ದಿ ಚಂದ್ರಿಕೇಯ ತೋರಿ ಪೊರೆದ ಕುಶಲರ.    ೪

ಕರ್ಕಶೋಕ್ತಿಗಳಲಿ ಹರಿಯ ಮಹಿಮೆ ಜರಿಯಲು
ತರ್ಕತಾಂಡವನ್ನೇ ರಚಿಸಿ ಕುಟ್ಟಿ ನಲಿದರು.         ೫

ವ್ಯಾಸರಾಯ ವ್ಯಾಸರಾಯ ಎಂದು ಸ್ಮರಿಸಲು
ಘಾಸಿಗೊಳಿಸುವಂತ ದುರಿತ ಓಡಿಪೋಪುವು.  ೬

ಮಧ್ವಸಿದ್ಧಾಂತಸಿಂಧುಪೂರ್ಣಚಂದ್ರರ
ಬುದ್ಧಿ ಪೂರ್ಣರ ಸಕಲರಿಷ್ಟದಾತರ.                ೭

ಭೂತಪ್ರೇತ ಪೀಡೆ ದೂರ ಸ್ಮರಣ ಮಾತ್ರದಿ
ವಾತಪಿತ್ತ ರೋಗವಿಲ್ಲ ಭಜಿಸೆ ಭಕ್ತಿಲಿ.            ೮

ರತ್ನಮಂಚದಿಪ್ಪ ರೂಪ ಸ್ಮರಿಸಿ ಜಪಿಸಲು
ರತ್ನ ಮುತ್ತು ವರ್ಷಗೈವ ದೀನಶರಣರ.          ೯

ಪದುಮನಾಭಮಸ್ಕರೀಂದ್ರಸಾಕ್ಷಿಲಿಪ್ಪರ
ಬುಧರ ಮಾನಸಾಂಬುಜಾತಸೂರ್ಯಸದೃಶರ. ೧೦

ವೈರಾಗ್ಯಜ್ಞಾನಭಕ್ತಿತುಷ್ಟಿನಿತ್ಯಪೂರ್ಣರ 
ಆರಾಧ್ಯ ರಾಘವಾಖ್ಯವಿಠಲ ಪ್ರೇಮಪಾತ್ರರ.    ೧೧

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha