BENNE KADIYADIRO

ಬೆಣ್ಣೆ ಕದಿಯದಿರೋ ಹೇ ಕೃಷ್ಣ
ಚಿಣ್ಣರ ಕೂಡಿ ಮನೆ ಮನೆಗೆ ಹೋಗಿ

ನಂದ ನಂದನ ಕೃಷ್ಣ ಸುಂದರ ಬೇಡುವೆ 
ಇಂದಿರೆ ರಮಣನೆ ಕುಂದು  ವಿದೂರನೆ 
ಇಂದುಮುಖಿಯಳೇ ಕೇಳೆ ತಿಂದು ಹಾಲ್ ಬೆಣ್ಣೆಗಳ 
ಕುಂದು ಕಳೆಯುತ ಮೋಕ್ಷಾನಂದ ಈವೆನೇ ತಾಯೆ.     ೧

ಎಮ್ಮ ಮನೆಯ ಹಾಲು ಬೆಣ್ಣೆ ಸಾಲದೆ ನಿನಗೆ 
ಗುಮ್ಮಗೆ ಇಡುವೆನೊ ತುಂಟತನವು ಬೇಡ
ಅಮ್ಮ ಸಾಲದೆ ನನಗೆ ಉದರ ಬಹು ಎನಗಿದೋ
ಬೊಮ್ಮಾಂಡ ವಿದೆ ನೋಡೆ ಎನ್ನುತ್ತಾ ಬಾಯ ತೆರೆದ.  ೨

ಕಳ್ಳ ಎನ್ನುವರೊ ಕೃಷ್ಣ ಬೇಡವೊ ಚೌರ್ಯವು 
ಸುಳ್ಳ ಎನುವರೊ ಮನಕೆ ಖೇದವು ಬಹಳವು
ಕಳ್ಳ ಎನ್ನುವರ ಪಾಪ ಕದ್ದು ಗತಿಯ ಕೊಡುವೆ 
ಬಲ್ಲಿದ ರಾಘವ ವಿಠಲ ಓಡಿದ ಹೇಳಿ.                      ೩

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT