KADALARATIYA ETTIRE
ಕದಲಾರತಿಯ ಎತ್ತಿರೆ ಕಡಲಶಾಯಿಗೆ. ಪ
ಮದನಮೋಹನನಿಗೆ ರಾಧೆಯ ರಮಣಗೆ
ಬುಧ ಪದ ಸ್ತುತನಿಗೆ ವಿಧಿಭವ ಸರ್ವೇಶಗೆ ಅಪ
ಅನಂತ ಪ್ರದೇಶದಲಿ ಅನಂತ ಕಾಲಕೆ ವ್ಯಾಪ್ತ
ಅನಂತ ಜೀವರ ನೇತ ಅನಂತ ಮಹಿಮನೀತ
ಅನಂತಾನಂತಗುಣ ಅನಂತ ಭಕ್ತರ ಗತಿ
ಅನಂತ ರೂಪದಿ ಸಮ ಅನಂತ ನಾಮಗೆ ಇಂದು. ೧
ಅನಂತ ಕಾಯಗೆ ನಮೋ ಅನಂತ ಕಾರ್ಯಗೆ ನಮೋ
ಅನಂತ ಜೀವರ ಸಂಘ ಅನಂತ ಕರ್ಮಂಗಳ ಕಂಡು
ಅನಂತ ಫಲಗಳನೀವ ಅನಂತಾಕಾಶದಿಯಿಪ್ಪ
ಅನಂತ ಶಯನಗೆ ಅನಂತ ನಮನ ಪೂರ್ವಕದಿಂದ. ೨
ಅನಂತ ಸಿರಿಕಾಂತ ಶ್ರೀ ಹನುಮಂತ ಸನ್ನುತ
ಅನಂತ ಮನಃ ಪ್ರೇರಕ ಶ್ರೀಮಂತ ಬಲವಂತ
ಅನಂತ ಕರುಣೆಯನಿತ್ತು ಅನಂತ ದುರಿತವ ಕಳೆದು
ಮದನಮೋಹನನಿಗೆ ರಾಧೆಯ ರಮಣಗೆ
ಬುಧ ಪದ ಸ್ತುತನಿಗೆ ವಿಧಿಭವ ಸರ್ವೇಶಗೆ ಅಪ
ಅನಂತ ಪ್ರದೇಶದಲಿ ಅನಂತ ಕಾಲಕೆ ವ್ಯಾಪ್ತ
ಅನಂತ ಜೀವರ ನೇತ ಅನಂತ ಮಹಿಮನೀತ
ಅನಂತಾನಂತಗುಣ ಅನಂತ ಭಕ್ತರ ಗತಿ
ಅನಂತ ರೂಪದಿ ಸಮ ಅನಂತ ನಾಮಗೆ ಇಂದು. ೧
ಅನಂತ ಕಾಯಗೆ ನಮೋ ಅನಂತ ಕಾರ್ಯಗೆ ನಮೋ
ಅನಂತ ಜೀವರ ಸಂಘ ಅನಂತ ಕರ್ಮಂಗಳ ಕಂಡು
ಅನಂತ ಫಲಗಳನೀವ ಅನಂತಾಕಾಶದಿಯಿಪ್ಪ
ಅನಂತ ಶಯನಗೆ ಅನಂತ ನಮನ ಪೂರ್ವಕದಿಂದ. ೨
ಅನಂತ ಸಿರಿಕಾಂತ ಶ್ರೀ ಹನುಮಂತ ಸನ್ನುತ
ಅನಂತ ಮನಃ ಪ್ರೇರಕ ಶ್ರೀಮಂತ ಬಲವಂತ
ಅನಂತ ಕರುಣೆಯನಿತ್ತು ಅನಂತ ದುರಿತವ ಕಳೆದು
ಅನಂತ ಸುಖವೀಯುವ ರಾಘವ ವಿಠಲಗೆ. ೩
Comments
Post a Comment