SRI BRAHMANYA THEERTHARU

ಗುರುವರ ಪಾಲಿಸೋ ಎಮ್ಮ ನಿರುತದಿ
ಕರಪಿಡಿಯುತ ಸನ್ಮಾರ್ಗದಿ ಇರಿಸೋ.

ಪುರುಷೋತ್ತಮ ಮುನಿ ಪದಯುಗ ಭಜಕನೆ
ಪುರುಷೋತ್ತಮ ಹರಿ ಪದದಲಿ ಇರಿಸೋ
ಪುರು ದೋಷಗಳ ಮನದಿಂದಲಪಹರಿಸೋ
ಪುರುಹೂತರಿಪುಜಾತ ಚೇಷ್ಟೆಯ ಬಿಡಿಸೋ. ೧

ಘೋರ ವ್ಯಾಧಿಗಳ ಬಾಧೆ ತಪ್ಪಿಸಿ ಕಾಯೋ
ಮಾರಪಿತನ ಸೇವೆಗೊಪ್ಪುವಂದದಿ ಮಾಡೋ
ಭಾರ ಹಾಕಿರುವೆನೊ ಗುರುವೆ ಮಧ್ವ ಮತದ
ಸಾರ ಬೊಧನೆ ಗೈದು ದುರುಳ ಯಾತನೆ ಹರಿಸೋ. ೨

ಬ್ರಹ್ಮಣ್ಯ ಗುರುವರ ವಂದಿಪೆ ಚರಣವ
ಹೆಮ್ಮೆಯಿಂದಲಿ ಸೇವೆಗೈಯುವೆ ಭಾಸ್ಕರ
ಒಮ್ಮೆಯಾದರೂ ಸಿರಿ ರಾಘವ ವಿಠಲನ
ಒಮ್ಮನಸ್ಸಿಂದಲಿ ಭಜಿಪ ಭಾಗ್ಯವನೀಯೋ.  ೩

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha