KARUNISO EMMMANU GURURAYA

ಕರುಣಿಸು ಎಮ್ಮನು ಗುರುರಾಯ
ಕರುಣಿಗಳರಸನೆ ಪೊರೆವರಿನ್ಯಾರು

ವರ ತುಂಗಾ ವಾಸನೆ   ಪರತತ್ವ  ನಿಪುಣನೆ
ನರಹರಿ ಭಕುತನೆ       ಶಿರಬಾಗಿ ಬಂದಿಹೆ
ಸಿರಿಲೋಲನಾಜ್ಞೆಲಿ    ಮೆರೆವೆ ವೃಂದಾವನದಿ 
ವರಗಳನೀಯುತ     ದುರಿತ ಕಳೆದು ನಿತ್ಯ.    1

ಗಜ ತುರಗ ರಥದಲಿ      ನಿಜ ಜನರು ಸೇವಿಸೆ
ಭುಜಜಾತರೆಲ್ಲರೂ        ನಿಜ ಪದದಿ ಇರುತಿರೆ
ಸುಜನಕುಲೋತ್ತುಂಗ    ಭುಜಗಶಯನದಾಸ
ಅಜಸಮ ಸಮಯವ    ನಿಜ ಮತಿಗೆ ತಾರೋ 2

ಅಘರಾಶಿ ಕಳೆಯುತ     ಮಿಗೆ ಹರುಷ ಸುರಿಸುತ
ಜಗದೊಳು ಭಕುತರ      ಓಘ ಲಾಲಿಪೆ ನಿತ್ಯ
ಅಗಣಿತ ಮಹಿಮನೆ       ರಾಘವ ವಿಠಲನ
ಬಗೆಬಗೆ ಮಹಿಮೆಯ     ಹಿಗ್ಗಿ ಕಾಣುವೆ ನಿತ್ಯ.    3

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha