Mamsada Pindavu

ಮಾಂಸದ ಪಿಂಡವು ಮಲಮೂತ್ರ ಗುಂಡಿಯು

ತೃಣ ಮುಚ್ಚಿದ ಕೂಪವು ಎಂಬುದ ಮರೆತು

ಕಮಲನೇತ್ರಳೆ ಪಿಕಕಂಠೆ ಸುಮನೋಹರೆ

ನೀನಿರೆ ರಾಜ್ಯ ಧನ ಕನಕ ಪೂರ್ಣನು

ಎನ್ನುತ ಹರಿಯ ಮರೆತು ಮೆರೆಯುವರು

ಮಧುರ ವಚನವು ಹೃದಯ ತೀಕ್ಷ್ಣ ವು

ಕಾರ್ಯ ಸಾಧಿಸಲು ಭರ್ತೃ ಭ್ರಾತೃ ಎಣಿಸರು

ಶಿಲೆ ಹೆಣ್ಣಾಗಿಸಿದ ರಾಘವ ವಿಠಲನ

ಕರ್ದಮವರದನ ಬೇಡಲು ಒಲಿದರೆ

ಸಾಧನಕನುಕೂಲ ಸತಿಯನೀವ.

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha