Mamsada Pindavu
ಮಾಂಸದ ಪಿಂಡವು ಮಲಮೂತ್ರ ಗುಂಡಿಯು
ತೃಣ ಮುಚ್ಚಿದ ಕೂಪವು ಎಂಬುದ ಮರೆತು
ಕಮಲನೇತ್ರಳೆ ಪಿಕಕಂಠೆ ಸುಮನೋಹರೆ
ನೀನಿರೆ ರಾಜ್ಯ ಧನ ಕನಕ ಪೂರ್ಣನು
ಎನ್ನುತ ಹರಿಯ ಮರೆತು ಮೆರೆಯುವರು
ಮಧುರ ವಚನವು ಹೃದಯ ತೀಕ್ಷ್ಣ ವು
ಕಾರ್ಯ ಸಾಧಿಸಲು ಭರ್ತೃ ಭ್ರಾತೃ ಎಣಿಸರು
ಶಿಲೆ ಹೆಣ್ಣಾಗಿಸಿದ ರಾಘವ ವಿಠಲನ
ಕರ್ದಮವರದನ ಬೇಡಲು ಒಲಿದರೆ
ಸಾಧನಕನುಕೂಲ ಸತಿಯನೀವ.
Comments
Post a Comment