INDIRE NAMIPENU

ಇಂದಿರೆ ನಮಿಪೆನು      ಕುಂದುರಹಿತನ ರಾಣಿ
ಚೆಂದದಿ ಹರಿ ತಾನು     ಬಂದು ನಿಲ್ಲುವಂತೆ ಮಾಡು


ಪ್ರಲಯ ಕಾಲದಿ ಹರಿಯು ಆಲದೆಲೆಯಲಿ ಇರಲು
ಜಲ ಮೊದಲು ರೂಪದಿ    ಬಲು ಸೇವೆ ಮಾಡಿದೆ
ಇಳೆ ಸಿರಿ ದುರ್ಗೆಯೆ          ಲಲಿತ ಸ್ತುತಿಗಳ ಮಾಡೆ
ಜಲಧಿಶಯನನು ಇಹನು  ಕಲುಷರಹಿತಳೆ ವಶದಿ.   ೧

ಆಸನ ಭೂಷಣ               ವಾಸುದೇವಗೆ ತಾನು 
ಭಾಸುರವರ್ಣಳೆ              ದಾಸಿ ಸಾಸಿರ ಇರಲು
ಭೂಸುರವಂದ್ಯನ            ಸೂಸಿ ಸೇವಿಪೆ ಭಾಗ್ಯೆ
ಕೇಶವ ನಿನ್ನೊಳು             ವಾಸಿಪನೊಲುಮೆಲಿ.    ೨

ಮಂಕು ರಾವಣ ತಾನು  ಕೊಂಕು ಮಾತನು ಪೇಳೆ
ಲಂಕೆಯ ವನಕಿನ್ನು       ಬೆಂಕಿ ಇರಿಸಿ ಸುತನಿಂ
ಬಿಂಕದಿಂದಲಿ ನಿಷ್ಕ       ಳಂಕ ರಾಮನ ಸ್ತುತಿಸಿ
ಅಂಕದಿ ಕುಳಿತೆ ಶ         ಶಾಂಕ ಸಾಸಿರ ಶೋಭೆ.     ೩

ಭೈಷ್ಮೀ ತನುವ ನಿನ್ನ             ಕೃಷ್ಣನೊಯ್ಯಲು ಅಸ
ಹಿಷ್ಣು ರುಗ್ಮಿಯು ಇಷು         ಇಷ್ವಾಸನವ ತರಲು
ಜಿಷ್ಣು ಅರಿಯನರಿಯಲೊಂ ದಿಷ್ಟು ಮಾತಾಡದೆ
ಸುಷ್ಠು ಒಲಿಸಿಕೊಂಡೆ ಭ್ರಾ     ಜಿಷ್ಣು ಸ್ವರೂಪಳೆ.    ೪

ಮಂದಹಾಸಳೆ ಶಂಭು  ಇಂದು ಶೇಖರ ಪೂಜ್ಯೆ 
ಕುಂದರದನೆ ಕಂಜ       ಬಂಧುಪ್ರಖರ ಕಾಂತೆ
ಬಂಧನದೊಳು ಸಿಲುಕಿ ನೊಂದ ಜನಗಳ ಮನದಿ
ಚೆಂದ ರಾಘವ ವಿಠಲ   ನಿಂದು ನಲಿವಂತೆ ಮಾಡೆ.೫

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT