MADIVANTARU UNABAHUDANNA

ಮಡಿವಂತರುಣಬಹುದಣ್ಣ  .
ಕಡಿ ಕಡಿ ಕಲಿಕಾಲ ಮಡಿದು ಹೋಗಿದೆ ಧರ್ಮ.

ಉದಯ ಕಾಲಕೆ ಎದ್ದು ವಾಪಿಕೂಪದಿ ಮಿಂದು
ಮದದಿಂದ ಮಡಿಯುಟ್ಟು ಬಿಂಕದಿ ಪೂಜಿಸಿ
ಬುಧರ ದುರಿತವ ಜಪಿಸಿ ಕ್ರೋಧಾಹುತಿಗಳ ಹಾಕಿ
ಹೃದಯ ಕಲ್ಮಷದಿಂದ ಉಣುವುದು ಮಡಿಯೇ.  ‌ ೧

ಮೌನದ ಸೋಗನು ಹಾಕಿ ಶಿಖೆಯನು ಕೆದರಿ
ನಾನೊಬ್ಬ ಶುಚಿಯೆಂದು ಅಶುಚಿ ವಿಷಯಗಳನಾಡಿ
ಮಾನವಿದೂರನ ಶೇಷವೆಂಬುದ ಮರೆತು
ಮಾನ ರುಚಿಯೊಳು ಇಡುತ ಉಣುವುದು ಮಡಿಯೇ. ೨

ಪಾಕಶೋಧಕ ಹಂಸ ಸ್ಮರಣೆಯು ಮಡಿಯು
ಪಾಕದೇವತೆ ವಾಯು ಸಿರಿಹರಿ ಸ್ಮೃತಿ ಮಡಿಯು
ನೋಕನೀಯನು ಉಂಡು ಬಿಟ್ಟಿದ್ದು ಮಡಿಯು
ಸೂಕರಾನ್ನವು ಡಂಭತನದೊಳು ಹಾಕಲು.   ೩

ಪಂಕ್ತಿ ಪಾವನರೊಳು ಉಣುವುದೇ ಮಡಿಯು
ಸಕ್ತಿ ಶ್ರೀ ಹರಿಪಾದದೊಳಗಿರೆ ಮಡಿಯು ವಿ
ರಕ್ತಿ ಉಳ್ಳವರನ್ನ ಮೆಲುವುದೇ ಮಡಿಯು
ಸೂಕ್ತಿಯಿಂದಲಿ ಕರೆದು ಅನ್ನವಿಕ್ಕಲು ಮಡಿಯು.   ೪

ಭೋಗಿಶಯನನ ಭಕುತರಿತ್ತ ಅನ್ನವು ಮಡಿಯು
ಬೇಗ ಅನ್ನದ ಅನ್ನ ಅನ್ನಾದ ಸ್ಮೃತಿ ಮಡಿಯು
ಗೂಗಿಯಂದದಿ ಹರಿಯ ಕಾಣದ ಮನುಜನ್ನ
ರಾಘವ ವಿಠಲ ತಾನು ಮೆಚ್ಚನು ಎಂದಿಗೂ.    ೫

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha