Yadava krishnanu
ಯಾದವ ಕೃಷ್ಣನು ಯುದ್ಧದಿ ಮೋಹಿತ ನಾದ ಪಾರ್ಥಗೆ ಗೀತೆಯ ಪೇಳ್ದನು. ಬಂಧುವ್ಯಾಮೋಹದಿ ಶಸ್ತ್ರವ ಬಿಸುಟಿರೆ ಅಂದದ ವಚನವ ನಂದನು ಪೇಳ್ದನು ನೊಂದದಿರೋ ಪಾರ್ಥ ಜೀವನು ನಿತ್ಯನು ಬಂದು ಪೋಗ್ವುದು ಈ ಶರೀರವು. ೧ ಕರ್ಮದ ಮರ್ಮವ ಅರಿಯೊ ಪಾರ್ಥನೆ ಕರ್ಮದ ತ್ಯಾಗವು ಪುರುಷಾರ್ಥವಲ್ಲವು ಪರಮಪುರುಷ ಹರಿಯಜ್ಞವು ಕರ್ಮವು ಅರ್ಪಿಸೆ ಭಕುತಿಲಿ ಮುಕುತಿಯೀವುದು. ೨ ಜ್ಞಾನಿಯ ಕರ್ಮವು ಫಲವ ಕೊಡುವುದು ಹೀನ ಕರ್ಮವು ಬಂಧಕವಾಗ್ವುದು ಮನವ ಎನ್ನಲಿ ಇಡುತ ಸಕಲವು ಎನ್ನಾಧೀನವು ಎನುತಲರ್ಚಿಸು . ೩ ಧ್ಯಾನಕೆ ಜ್ಞಾನವು ಜ್ಞಾನಕೆ ಕರ್ಮವು ಮನದ ಶಾಂತಿಗೆ ಶುದ್ಧ ಕರ್ಮವು ಇನಿತು ಮೋಕ್ಷಕೆ ಸಾಧನ ಕರ್ಮವು ಅನಿಲಮತವಿದು ಏಳೆಲೊ ಪಾರ್ಥನೇ. ೪ ಜಗದ ಚಕ್ರವ ನಿರುತ ತಿರುಗಿಸು ರಾಗವ ವಿಷಯದಿ ಧೈರ್ಯದಿ ಭೇದಿಸು ಸಾಗರಶಯನನು ಸಕಲ ನಿಯಂತೃವು ಬಗೆದು ದೇಹವ ಬಿಡೆ ನಿರ್ವಾಣವು. ೫ ಎನ್ನ ಭಕುತರು ನಾಶ ಹೊಂದರು ಎನ್ನ ದ್ವೇಷಿಸೆ ತಮವು ನಿಯತವು ಮನವ ಸಾತ್ವಿಕ ಪಥದಿ ಕೂಡಿಸೊ ಎನ್ನ ಪೂಜೆಯು ವಿವಿಧ ಧರ್ಮವು. ೬ ರಮೆಗೆ ಅರಸನು ಭಕ್ತಿಗೆ ಒಲಿವೆನು ಸಮನು ಉತ್ತಮ ಪುರುಷ ಕ್ಷೇತ್ರಜ್ಞನು ತಮವು ನೀಗಿತೆ ಶಸ್ತ್ರವ ಹಿಡಿಯೆಲೊ ನಿಮ್ಮದೆ ಜಯವೆಂದ ರಾಘವವಿಠಲನು. ೭